Connect with us

    LATEST NEWS

    ಎಲ್ಲಾ ಘಟನೆ ಮರೆತು ಮತ್ತೆ ಕಾಲೇಜು ಪ್ರಾರಂಭಿಸಲು ಸಹಕರಿಸಿ – ಶಾಸಕ ರಘುಪತಿ ಭಟ್

    ಉಡುಪಿ: ಹಿಜಬ್ ವಿವಾದ ಪ್ರಾರಂಭವಾಗಿ ಕೊನೆಗೆ ಹೈಕೋರ್ಟ್ ಮಧ್ಯಪ್ರವೇಶಿಸಿ ಮೌಖಿಕ ಆದೇಶ ನೀಡಿದ್ದು, ಇದೀಗ ಮತ್ತೆ ಶಾಲಾ ಕಾಲೇಜು ಆರಂಭಕ್ಕೆ ಮುಂದಾಗಿದೆ.ಈ ಹಿನ್ನಲೆ ಹಿಜಬ್ ವಿವಾದದ ಕೇಂದ್ರ ಬಿಂದು ಆಗಿರುವ ಉಡುಪಿಯಲ್ಲಿ ಮತ್ತೆ ಶಾಲಾ ಕಾಲೇಜು ಆರಂಭಸಲು ಸ್ಥಳೀಯ ಶಾಸಕರು ಮುಂದಾಗಿದ್ದು, ಹಿಂದೆ ನಡೆದ ಎಲ್ಲಾ ಘಟನೆಗಳನ್ನು ಮರೆಯೋಣ. ಕಾಲೇಜು ಪ್ರಾರಂಭಿಸಲು ಎಲ್ಲರೂ ಸಹಕರಿಸೋಣ. ನಮ್ಮ ಧಾರ್ಮಿಕ ಆಚರಣೆಗಳನ್ನು ಮನೆಯಲ್ಲಿ ಆಚರಿಸೋಣ ಎಂದು ಉಡುಪಿ ಶಾಸಕ ರಘುಪತಿ ಭಟ್ ವಿದ್ಯಾರ್ಥಿಗಳಿಗೆ ಕರೆ ನೀಡಿದ್ದಾರೆ.


    ಹಿಜಬ್ ವಿಚಾರವಾಗಿ ಅಂತರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಯಾಗಿದೆ. ನಾವು ಏನೇ ಇದ್ದರೂ ಒಟ್ಟಾಗಿ ಇದ್ದೇವೆ ಎಂಬ ಸಂದೇಶ ನೀಡೋಣ ಸರ್ಕಾರ ನಾಳೆಯಿಂದ ತರಗತಿಗಳನ್ನು ಪ್ರಾರಂಭಿಸಲಿ ಎಂದು ತಿಳಿಸಿದರು.
    ಕೇಸರಿ ಶಾಲನ್ನು ಯಾರೂ ಹಾಕಬೇಡಿ. ಹಿಜಬ್ ಅನ್ನು ತರಗತಿ ಒಳಗೆ ಹಾಕಬೇಡಿ ಎಂದು ರಘುಪತಿ ಭಟ್ ವಿದ್ಯಾರ್ಥಿಗಳಲ್ಲಿ ಮನವಿ ಮಾಡಿದ್ದು, ತಕ್ಷಣವೇ ತರಗತಿಗಳನ್ನು ಪ್ರಾರಂಭಿಸಲು ಆಗ್ರಹಿಸಿದ್ದಾರೆ.

    Share Information
    Advertisement
    Click to comment

    You must be logged in to post a comment Login

    Leave a Reply