LATEST NEWS
ಏರ್ ಗನ್ ಇಟ್ಟುಕೊಂಡಿದ್ದಕ್ಕೆ ಕೃಷಿಕನ್ನು ಬಂಧಿಸಿದ ಅಮಾಸೆಬೈಲ್ ಅರಣ್ಯಾಧಿಕಾರಿಗಳ ವಿರುದ್ದ ಆಕ್ರೋಶ
ಉಡುಪಿ ಫೆಬ್ರವರಿ 15: ಕೃಷಿಗೆ ಪೂರಕವಾದ ಏರ್ ಗನ್ ಇರಿಸಿಕೊಂಡಿದ್ದಕ್ಕೆ ಅರಣ್ಯ ಇಲಾಖೆಯ ಸಿಬ್ಬಂದಿಗಳು ಯುವಕನ ಮೇಲೆ ಹಲ್ಲೆ ನಡೆಸಿ ವಶಕ್ಕೆ ಪಡೆದಿರುವ ಘಟನೆ ವಿರುದ್ದ ಇಂದು ಸ್ಥಳೀಯರು ಅಮಾಸೆಬೈಲ್ ಅರಣ್ಯಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಅಮಾಸೆಬೈಲಿನ ಗೋಳಿಕಾಡು ನಿವಾಸಿ ಮಾಲತಿ ಎಂಬವರ ಮಗ ನಟರಾಜ ಮತ್ತು ಸ್ಥಳೀಯ ಆನಂದ ಶೆಟ್ಟಿ ಅವರು ಎರ್ ಗನ್ ಹಿಡಿದುಕೊಂಡು ರಾತ್ರಿ ಬೈಕ್ ನಲ್ಲಿ ಬರುತ್ತಿದ್ದಾಗ ಅರಣ್ಯ ಇಲಾಖೆಯ ಸಿಬ್ಬಂದಿ ಅವರನ್ನುತಡೆದು ಏರ್ ಗನ್ ಹಾಗೂ ಬೈಕ್ ನ್ನು ವಶಕ್ಕೆ ಪಡೆದಿದ್ದರು. ಅಲ್ಲದೆ ಇಬ್ಬರ ಮೇಲೂ ಜಾಮೀನು ರಹಿತ ಪ್ರಕರಣ ದಾಖಲಿಸಿದ್ದರು.
ಈ ಹಿನ್ನಲೆ ಬಂಧನಕ್ಕೊಳಗಾಗಿರುವ ನಟರಾಜ ಹಾಗೂ ಆನಂದ ಶೆಟ್ಟಿ ಸಂಬಂಧಿಕರು ಮತ್ತು ಸ್ಥಳೀಯ ನಿವಾಸಿಗಳು ಇಂದು ನಿರಪರಾಧಿಗಳಾಗಿರುವ ಇಬ್ಬರು ಬಿಡುಗಡೆಗೊಳಿಸಬೇಕೆಂದು ಆಗ್ರಹಿಸಿ ಅಮಾಸೆಬೈಲ್ ಅರಣ್ಯಾಧಿಕಾರಿಗಳ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.
ಕೃಷಿಗೆ ಪೂರಕವಾಗಿ ಏರ್ ಗನ್ ಇರಿಸಿಕೊಂಡಿದ್ದ, ಕೃಷಿಕನನ್ನು ಬಂಧಿಸಿದ ಹಿನ್ನಲೆಯಲ್ಲಿ ಸಾರ್ವಜನಿಕರ ಆಕ್ರೋಶ ವ್ಯಕ್ತಪಡಿಸಿದರು. ಈ ಸಂದರ್ಭ ಸಾರ್ವಜನಿಕರು ಮತ್ತು ಅರಣ್ಯಾಧಿಕಾರಿ ನಡುವೆ ಮಾತಿನ ಚಕಮಕಿ ಕೂಡ ನಡೆಯಿತು.
You must be logged in to post a comment Login