Connect with us

    LATEST NEWS

    ಯೂಟ್ಯೂಬ್ ವಿಡಿಯೋಗಾಗಿ ಬಾಲಕರ ಕಿಡ್ನಾಪ್….!!

    ಮಂಗಳೂರು ಜನವರಿ 16: ಮಂಗಳೂರಿನಲ್ಲಿ ಇತ್ತೀಚೆಗೆ ನಡೆದ ಬಾಲಕರ ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತರಾಗಿರುವ ಆರೋಪಿಗಳು ತಾವು ಯೂಟ್ಯೂಬ್ ಗೆ ವಿಡಿಯೋ ಮಾಡಲು ಈ ರೀತಿಯ ಕೃತ್ಯವನ್ನು ಎಸಗಿದ್ದಾಗಿ ಪೊಲೀಸರ ಮುಂದೆ ತಪ್ಪೊಪ್ಪಿಕೊಂಡಿದ್ದಾರೆ.


    ಮೂವರು ಬಾಲಕರು ಕೊಂಚಾಡಿ ಮಹಾಲಸಾ ದೇವಾಲಯದಿಂದ ಮನೆ ಕಡೆಗೆ ಹೋಗುತ್ತಿರುವಾಗ ದ್ವಿಚಕ್ರ ವಾಹನದಲ್ಲಿ ಬಂದ ಮೂವರು ಯುವಕರು ಗೋಣಿಚೀಲ ಹಾಕಿ ಬಾಲಕರನ್ನು ಕಿಡ್ನಾಪ್‌ ಮಾಡಲು ಯತ್ನಿಸಿದ್ದರು. ಈ ಸಂದರ್ಭ ಒಬ್ಬ ಬಾಲಕ ಓಡಿ ತಪ್ಪಿಸಿಕೊಂಡಿದ್ದರೆ, ಇನ್ನೊಬ್ಬನನ್ನು ಹಿಡಿಯುವಾಗ ಸಾರ್ವಜನಿಕರು ಬಂದರೆಂದು ಬಾಲಕರನ್ನು ಬಿಟ್ಟು ಆರೋಪಿಗಳು ಓಡಿಹೋಗಿದ್ದರು. ಈ ದೃಶ್ಯ ಸಿಸಿಟಿವಿಯಲ್ಲೂ ಸೆರೆಯಾಗಿತ್ತು. ಇದನ್ನು ಆಧರಿಸಿ ಕಂಕನಾಡಿ ನಗರ ಪೊಲೀಸರು ಪ್ರಕರಣ ದಾಖಲಿಸಿ ಆರೋಪಿಗಳನ್ನು ಬಂಧಿಸಿದ್ದರು.

    ಆ ವೇಳೆ ತನಿಖೆ ನಡೆಸಿದಾಗ ಮೂವರು ಆರೋಪಿಗಳು ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದಾರೆ. ತಾವು ಮೋಜಿಗಾಗಿ ಈ ಕೃತ್ಯ ಎಸಗಿದ್ದು, ಕಿಡ್ನಾಪ್‌ ಮಾಡುವ ದೃಶ್ಯಗಳನ್ನು ವಿಡಿಯೋ ಮಾಡಿ ಯೂಟ್ಯೂಬ್‌ಗೆ ಅಪ್ಲೋಡ್ ಮಾಡಲು ಇದನ್ನು ಮಾಡಿರುವುದಾಗಿ ಹೇಳಿದ್ದಾರೆ. ಇನ್ನು ಕಿಡ್ನಾಪ್‌ ವೇಳೆ ತಪ್ಪಿಸಿಕೊಂಡ ಬಾಲಕ ಕೂಡಾ ಅಂದು ನಡೆದ ಕೃತ್ಯವನ್ನು ಮಾಧ್ಯಮದ ಮುಂದೆ ಹೇಳಿದ್ದಾನೆ. ಇನ್ನು ಕಿಡ್ನಾಪ್‌ ವೇಳೆ ತಪ್ಪಿಸಿಕೊಂಡ ಹಾಗೂ ಗೊಬ್ಬೆ ಹೊಡೆದು ಜನರನ್ನು ಸೇರಿಸಿ ಆರೋಪಿಗಳಿಂದ ಪರಾರಿಯಾದ ಬಾಲಕರ ದಿಟ್ಟ ನಡೆಗೆ ಸಾರ್ವಜನಿಕರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

    Share Information
    Advertisement
    Click to comment

    You must be logged in to post a comment Login

    Leave a Reply