Connect with us

    LATEST NEWS

    ಉಳ್ಳಾಲ‌ ವಿಧಾನಸಭಾ ಕ್ಷೇತ್ರದ ಜನರೂ ನಮ್ಮವರೇ – ಶಾಸಕ ವೇದವ್ಯಾಸ್ ಕಾಮತ್

    ಉಳ್ಳಾಲ‌ ವಿಧಾನಸಭಾ ಕ್ಷೇತ್ರದ ಜನರೂ ನಮ್ಮವರೇ – ಶಾಸಕ ವೇದವ್ಯಾಸ್ ಕಾಮತ್

    ಮಂಗಳೂರು ಎಪ್ರಿಲ್ 29: ಭಾರತೀಯ ಜನತಾ ಪಾರ್ಟಿ ಮಂಗಳೂರು ನಗರ ದಕ್ಷಿಣ ವತಿಯಿಂದ ಶಾಸಕ ವೇದವ್ಯಾಸ್ ಕಾಮತ್ ನೇತೃತ್ವದಲ್ಲಿ ಉಳ್ಳಾಲ‌ ವಿಧಾನಸಭಾ ಕ್ಷೇತ್ರದ ಬಿಜೆಪಿ ಮುಖಂಡರ ಮೂಲಕ 5 ಟನ್ ಅಕ್ಕಿಯನ್ನು ಅಲ್ಲಿನ ಬಿಜೆಪಿ ಅಧ್ಯಕ್ಷರ ಕೈಗೆ ಹಸ್ತಾಂತರಿಸಲಾಯಿತು.

    ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 8 ವಿಧಾನಸಭಾ ಕ್ಷೇತ್ರಗಳ ಪೈಕಿ 7ರಲ್ಲಿ ಭಾರತೀಯ ಜನತಾ ಪಾರ್ಟಿಯಿಂದ ಗೆದ್ದ ಶಾಸಕರಿದ್ದೇವೆ. ಹಾಗೂ ಉಳ್ಳಾಲ ವಿಧಾನಸಭಾ ಕ್ಷೇತ್ರದಲ್ಲಿ ಅಲ್ಲಿನ ಮುಖಂಡರಾದ ಚಂದ್ರಹಾಸ್ ಪಂಡಿತ್ ಹೌಸ್, ಸಂತೋಷ್ ರೈ ಬೋಳಿಯಾರು ಹಾಗೂ ನಮ್ಮ ಕಾರ್ಯಕರ್ತರು ಅಲ್ಲಿನ ಜನರಿಗಾಗಿ ಅವಿರತವಾಗಿ ದುಡಿಯುತ್ತಿದ್ದಾರೆ. ಅವರಿಗೆ ನೈತಿಕ ಬಲ ತುಂಬುವ ನಿಟ್ಟಿನಲ್ಲಿ ಅವರೊಂದಿಗೆ ಸದಾ ನಾವಿರುತ್ತೇವೆ ಎಂದು ಶಾಸಕ ತಿಳಿಸಿದ್ದಾರೆ.

    ಸದ್ಯ 5 ಟನ್ ಅಕ್ಕಿಯನ್ನು ಕಳುಹಿಸಲಾಗಿದೆ. ಕಾರಣಾಂತರಗಳಿಂದ ಲಾಕ್ ಡೌನ್ ಮುಂದುವರಿದರೆ ಉಳ್ಳಾಲ ವಿಧಾನಸಭಾ ಕ್ಷೇತ್ರದ ಜನರಿಗೆ ಮತ್ತಷ್ಟು ಸಹಾಯ ಒದಗಿಸಲು ಸಿದ್ಧರಾಗಿದ್ದೇವೆ. ಕ್ಷೇತ್ರ ಬೇರೆಯದೇ ಆದರೂ ಅಲ್ಲಿನ ಜನರು ನಮ್ಮವರೇ ಎನ್ನುವ ಭಾವನೆ ನಮ್ಮದು. ಹಾಗಾಗಿ ಅಲ್ಲಿನ ಜನರೊಂದಿಗೆ ಸದಾ ನಾವಿರುತ್ತೇವೆ ಎಂದು ತಿಳಿಸಿದ್ದಾರೆ.

    Share Information
    Advertisement
    Click to comment

    You must be logged in to post a comment Login

    Leave a Reply