Connect with us

    LATEST NEWS

    ಮಳೆಗಾಲದಲ್ಲಿ ಮೀನುಗಾರಿಕೆ ಎಷ್ಟು ಅಪಾಯಕಾರಿ ಅನ್ನುವುದನ್ನು ಕಣ್ಣಿಗೆ ಕಟ್ಟವಂತಿದೆ ಈ ದೃಶ್ಯಗಳು…..!!

    ಮಂಗಳೂರು, ಜುಲೈ 4 : ಮಳೆಗಾಲದಲ್ಲಿ ನಾಡದೋಣಿಗಳಲ್ಲಿ ಮೀನುಗಾರಿಕೆ ಹೋಗುವುದು ಸಾಮಾನ್ಯ. ಆದರೆ, ಸಮುದ್ರದ ಅಬ್ಬರದ ಮಧ್ಯೆ ದೋಣಿಗಳನ್ನು ಸಮುದ್ರಕ್ಕಿಳಿಸುವುದೇ ದೊಡ್ಡ ಸಾಹಸ. ಮಂಗಳೂರು ಹೊರವಲಯದ ಸೋಮೇಶ್ವರದಲ್ಲಿ ನಾಡದೋಣಿ ಒಂದನ್ನು ಮೀನುಗಾರರು ಸಮುದ್ರಕ್ಕಿಳಿಸುವ ಸಂದರ್ಭದಲ್ಲಿ ಅಲೆಗಳ ಹೊಡೆತಕ್ಕೆ ಸಿಲುಕಿದ ದೋಣಿ ತಿರುಗಿ ದಡಕ್ಕೆ ಅಪ್ಪಳಿಸಿದ ದೃಶ್ಯ ಮೊಬೈಲಿನಲ್ಲಿ ಸೆರೆಯಾಗಿದೆ.

    ಅಲೆಗಳ ನಡುವೆ ತೇಲುತ್ತಾ ಒಂದು ಹಂತಕ್ಕೆ ಹೋದ ದೋಣಿ, ಮತ್ತೆ ದೊಡ್ಡ ಅಲೆಯೊಂದಕ್ಕೆ ಸಿಲುಕಿ ಪಲ್ಟಿಯಾಗುವ ಸಾಧ್ಯತೆಯಿತ್ತು. ಆದರೆ, ಅದೃಷ್ಟವಶಾತ್ ದೋಣಿ ಸುರಕ್ಷಿತವಾಗಿ ಮತ್ತೆ ದಡಕ್ಕೆ ಬಂದಿದೆ. ದೋಣಿಯಲ್ಲಿ ನಾಲ್ಕು ಮಂದಿ ಮೀನುಗಾರರು ಅಲೆಗಳ ನಡುವೆ ಸಾಹಸ ಮೆರೆಯುವ ದೃಶ್ಯ ಮೈನವಿರೇಳಿಸುತ್ತದೆ.. ಮಳೆಗಾಲದಲ್ಲಿ ಮೀನುಗಾರಿಕೆ ಎಷ್ಟು ಅಪಾಯಕಾರಿ ಅನ್ನುವುದನ್ನು ಕಣ್ಣಿಗೆ ಕಟ್ಟವಂತಿದೆ ಈ ದೃಶ್ಯಗಳು.

    Share Information
    Advertisement
    Click to comment

    You must be logged in to post a comment Login

    Leave a Reply