Connect with us

    LATEST NEWS

    ಕೇರಳದ ಮೀನುಗಾರಿಕಾ ಬೋಟ್ ದುರಂತ – ಮೂವರ ಶವ ಪತ್ತೆ – ರಕ್ಷಣಾ ಕಾರ್ಯ ಮುಂದುವರಿಕೆ

    ಮಂಗಳೂರು ಎಪ್ರಿಲ್ 14: ಮಂಗಳೂರು ಸಮುದ್ರ ತೀರದಲ್ಲಿ ಹಡಗಿಗೆ ಡಿಕ್ಕಿಯಾಗಿ ದುರಂತಕ್ಕೀಡಾದ ಮೀನುಗಾರಿಕಾ ಬೋಟ್ ನಲ್ಲಿ ಸಿಬ್ಬಂದಿಗಳ ಪೈಕಿ ಇಬ್ಬರನ್ನು ರಕ್ಷಣೆ ಮಾಡಲಾಗಿದ್ದು, ಮೂವರ ಮೃತದೇಹ ಪತ್ತೆಯಾಗಿದ್ದು, ಉಳಿದವರಿಗಾಗಿ ಶೋಧ ಕಾರ್ಯ ಮುಂದುವರೆದಿದೆ.

    ಮಂಗಳವಾರ ರಾತ್ರಿ 2.50 ಗಂಟೆಗೆ ಮಂಗಳೂರಿನಿಂದ ಸುಮಾರು 42 ನಾಟಿಕಲ್ ಮೈಲ್ ದೂರ ಎಂದರೆ ಮಂಗಳೂರು ಹಾಗೂ ಹೊಸಬೆಟ್ಟು ಪ್ರದೇಶದ ನಡುವಿನ ಸಮುದ್ರದಲ್ಲಿ ಸಿಂಗಾಪುರ ದೇಶದ MV APL LE Havre ಹಡಗು ಮತ್ತು ಕೇರಳ ರಾಜ್ಯದ ಮೀನುಗಾರಿಕಾ ಬೋಟು ಡಿಕ್ಕಿಯಾಗಿ ಮೀನುಗಾರಿಕಾ ಬೋಟು ಸಂಪೂರ್ಣ ಮುಳುಗಡೆಗೊಂಡು ಬೋಟಿನಲ್ಲಿ 14 ಜನ ಮೀನುಗಾರರ ಪೈಕಿ 2 ಮೀನುಗಾರರನ್ನು ಹಡಗಿನ ಸಿಬ್ಬಂದಿಯವರು ರಕ್ಷಣೆ ಮಾಡಿದ್ದಾರೆ. ನಂತರ ಪಣಂಬೂರು ಕೋಸ್ಟ್‌ಗಾರ್ಡ್ ಹಡಗಿನ ಅಧಿಕಾರಿ ಸಿಬ್ಬಂದಿಯವರು ರಕ್ಷಣಾ ಕಾರ್ಯ ಕೈಗೊಂಡು 3 ಜನ ಮೀನುಗಾರರ ಮೃತ ದೇಹವನ್ನು ಪತ್ತೆ ಮಾಡಿದ್ದಾರೆ.

    ರಕ್ಷಣೆ ಮಾಡಿದ ಇಬ್ಬರನ್ನು ಮೀನುಗಾರರಾದ ಸುನೀಲ್ ದಾಸ್ (34) ಪಶ್ಚಿಮ ಬಂಗಾಳ, ವೈಲುಮುರುಗನ್ (37) ತಮಿಳುನಾಡು ಮತ್ತು ಮೂವರು ಮೃತಪಟ್ಟವರಲ್ಲಿ ಮಾಣಿಕ್ ದಾಸ್ (40) ಅಲೆಕ್ಸಾಂಡರ್ (45) ಇವರು ತಮಿಳುನಾಡು ಮೂಲದವರಾಗಿದ್ದಾರೆ. ಮತ್ತೊಬ್ಬರು 50 ವರ್ಷ ಪ್ರಾಯದವರಾಗಿದ್ದಾರೆ.

    ಮೂವರ ಮೃತ ದೇಹವನ್ನು ಮಂಗಳೂರು ವೆನ್ಲಾಕ್ ಆಸ್ಪತ್ರೆಯ ಶವಗಾರದಲ್ಲಿ ಇಡಲಾಗಿದೆ. ರಕ್ಷಣೆ ಮಾಡಿದ 2 ಮೀನುಗಾರರನ್ನು ವೈದ್ಯಾಧಿಕಾರಿಯವರ ಮುಂದೆ ಹಾಜರು ಪಡಿಸಿ ವೈದ್ಯಕೀಯ ಪರೀಕ್ಷೆ ನಡೆಸಿ ವಿಚಾರಣೆ ಮಾಡಲಾಗಿದೆ ಎಂದು ಕರಾವಳಿ ಕಾವಲು ಪಡೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

    Share Information
    Advertisement
    Click to comment

    You must be logged in to post a comment Login

    Leave a Reply