Connect with us

    LATEST NEWS

    ಕೋಟೇಶ್ವರ – ಮಾರಕಾಸ್ತ್ರಗಳಿಂದ ಕಡಿದು ಫೈನಾನ್ಸಿಯರ್ ಬರ್ಬರ ಹತ್ಯೆ

    ಕುಂದಾಪುರ ಜುಲೈ 31: ಫೈನಾನ್ಶಿಯರ್ ಒಬ್ಬರನ್ನು ಆತನ ಕಚೇರಿಯಲ್ಲೇ ಮಾರಕಾಸ್ತ್ರಗಳಿಂದ ಕಡಿದು ಕೊಲೆ ಮಾಡಿರುವ ಘಟನೆ ಕೋಟೇಶ್ವರದ ಕಾಳಾವರ ಸಮೀಪ ನಡೆದಿದೆ.


    ಕೊಲೆಯಾದ ಫೈನಾನ್ಶಿಯರನ್ನು ಯಡಾಡಿ ಮತ್ಯಾಡಿ ಕೂಡಲ್ ನಿವಾಸಿ ಅಜೇಂದ್ರ ಶೆಟ್ಟಿ (33) ಎಂದು ಗುರುತಿಸಲಾಗಿದೆ. ಅಜೇಂದ್ರ ಅವರು ಕಳೆದ 5 ವರ್ಷಗಳಿಂದ ಸಳ್ವಾಡಿಯಲ್ಲಿ ಡ್ರೀಮ್ ಫೈನಾನ್ಸ್ ಎನ್ನುವ ಫೈನಾನ್ಸ್ ಸಂಸ್ಥೆಯನ್ನು ನಡೆಸಿಕೊಂಡುಬರುತ್ತಿದ್ದರು. ನಿನ್ನೆ ಶುಕ್ರವಾರ ಅಜೇಂದ್ರ ಶೆಟ್ಟಿ ರಾತ್ರಿಯಾದರೂ ಮನೆಗೆ ಹಿಂತಿರುಗದ ಕಾರಣ ಮನೆಯವರು ಹಾಗೂ ಅವರ ಸ್ನೇಹಿತರು ಅವರಿಗಾಗಿ ಹುಡುಕಾಡತೊಡಗಿದ್ದಾರೆ. ಈ ವೇಳೆ ಸ್ನೇಹಿತರಿಗೆ ಫೈನಾನ್ಸ್ ಒಳಗೆ ಕೊಲೆಯಾದ ಸ್ಥಿತಿಯಲ್ಲಿ ಅಜೇಂದ್ರ ಪತ್ತೆಯಾಗಿದ್ದಾರೆ.
    ಈ ಬಗ್ಗೆ ಕುಂದಾಪುರ ಗ್ರಾಮಾಂತರ ಕಂಡ್ಲೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    Share Information
    Advertisement
    Click to comment

    You must be logged in to post a comment Login

    Leave a Reply