BELTHANGADI
ಮಂಗಳೂರು ಮಹಾಮಳೆಗೆ ಯುವ ಚಿತ್ರ ನಿರ್ದೇಶಕನ ಬಲಿ
ಮಂಗಳೂರು ಮಹಾಮಳೆಗೆ ಯುವ ಚಿತ್ರ ನಿರ್ದೇಶಕನ ಬಲಿ
ಮಂಗಳೂರು ಮೇ 30: ಮಂಗಳೂರು ಮಹಾಮಳೆಗೆ ಇನ್ನೊಂದು ಬಲಿಯಾಗಿದೆ. ದಕ್ಷಿಣಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಎರ್ಮಾಯಿ ಪಾಲ್ಸ್ ನಲ್ಲಿ ಶೂಟ್ ಗೆ ತೆರಳಿದ್ದ ಯುವ ಚಿತ್ರ ನಿರ್ದೇಶಕ ಸಂತೋಷ್ ಶೆಟ್ಟಿ ಮೃತಪಟ್ಟಿದ್ದಾರೆ. ಪಾಲ್ಸ್ ನಲ್ಲಿ ಪೋಟೋಶೂಟ್ ನಡೆಸುತ್ತಿದ್ದ ಸಂದರ್ಭ ಕಾಲು ಜಾರಿ ಕೆಳಗೆ ಬಿದ್ದು ಸಂತೋಷ್ ಶೆಟ್ಟಿ ಸಾವನಪ್ಪಿದ್ದಾರೆ.
ನಿನ್ನೆ ಪೋಟೋಶೂಟ್ ಗೆಂದು ಸಂತೋಷ್ ಶೆಟ್ಟಿ ಹಾಗೂ ಐವರ ತಂಡ ಎರ್ಮಾಯಿ ಫಾಲ್ಸ್ ಗೆ ತೆರಳಿತ್ತು. ಮೂಲತಹ ಕಟೀಲು ನಿವಾಸಿಯಾಗಿರುವ ಸಂತೋಷ್ ಶೆಟ್ಟಿ ಕನಸು ಚಿತ್ರವನ್ನು ನಿರ್ದೇಶಿಸಿದ್ದರು. ಸಂತೋಷ್ ಶೆಟ್ಟಿ ಅವರ ಮೃತ ದೇಹಕ್ಕಾಗಿ ಎರ್ಮಾಯಿ ಫಾಲ್ಸ್ ನಲ್ಲಿ ಶೋಧ ಕಾರ್ಯ ನಡೆಸಿದ ಸ್ಥಳೀಯರ ತಂಡ ಮೃತದೇಹ ಪತ್ತೆ ಮಾಡಿದೆ.
ಎರ್ಮಾಯಿ ಫಾಲ್ಸ್ ನಲ್ಲಿ ಚಿತ್ರೀಕರಣ ಕೈಗೊಂಡಿದ್ದ ಸಂದರ್ಭದಲ್ಲಿ ಸಂತೋಷ್ ಶೆಟ್ಟಿ ಅವರು ಆಯತಪ್ಪಿ ನೀರಿಗೆ ಬಿದ್ದಿದ್ದಾರೆ ಎಂದು ಹೇಳಲಾಗಿದೆ. ಕಾಲಿಗೆ ರೋಬೋಟ್ ರೀತಿಯ ವಸ್ತುವೊಂದನ್ನು ಕಟ್ಟಿಕೊಂಡಿರುವುದು ಪತ್ತೆಯಾಗಿದೆ.
You must be logged in to post a comment Login