Connect with us

    LATEST NEWS

    ಸುಸೈಡ್ ಪಾಯಿಂಟ್ ಉಳ್ಳಾಲ ನೇತ್ರಾವತಿ ಸೇತುವೆಗೆ ತಡೆಬೇಲಿ

    ಮಂಗಳೂರು ಜುಲೈ 6: ಮಂಗಳೂರಿನಲ್ಲಿ ಸುಸೈಡ್‌ ಪಾಯಿಂಟ್ ಎಂದೇ ಗುರುತಿಸಲ್ಪಟ್ಟಿರುವ ಇತ್ತೀಚೆಗೆ ಅತಿ ಹೆಚ್ಚು ಆತ್ಮಹತ್ಯೆಗೆ ಕಾರಣವಾಗಿರುವ ರಾಷ್ಟ್ರೀಯ ಹೆದ್ದಾರಿ 66ರ ಉಳ್ಳಾಲ ನೇತ್ರಾವತಿಗೆ ಸೇತುವೆಗೆ ಕೊನೆಗೂ ತಡೆಬೇಲಿ ನಿರ್ಮಾಣಕ್ಕೆ ಚಾಲನೆ ಸಿಕ್ಕಿದೆ.

    ಸುಮಾರು 800 ಮೀಟರ್‌ ಉದ್ದದ ಈ ಸೇತುವೆಯಲ್ಲಿ ಒಟ್ಟು 4 ತಡೆಗೋಡೆಗಳು ಬರುತ್ತಿದ್ದು, ಇದರಿಂದ ಒಟ್ಟು 3,200 ಮೀಟರ್ ಉದ್ದದ ತಡೆಬೇಲಿ ನಿರ್ಮಾಣವಾಗಲಿದೆ. ಸುಮಾರು 55 ಲಕ್ಷ ರೂಪಾಯಿ ವೆಚ್ಚದಲ್ಲಿ ತಡೆಬೇಲಿ ನಿರ್ಮಾಣವಾಗಲಿದ್ದು, ಸೇತುವೆ ಆರಂಭದ ಎರಡೂ ದಿಕ್ಕಿನಲ್ಲಿ ಒಟ್ಟು 4 ಸಿಸಿ ಕ್ಯಾಮೆರಾ ಅಳವಡಿಸಲು ನಿರ್ಧರಿಸಲಾಗಿದೆ. ಸುಮಾರು ಎರಡು ತಿಂಗಳ ಕಾಲ ಕಾಮಗಾರಿ ನಡೆಯಲಿದೆ ಎಂದು ಮೂಡಾ ಎಂಜಿನಿಯರ್‌ ಅಕ್ಬರ್‌ ಬಾಷಾ ಹೇಳಿದ್ದಾರೆ.


    ಸೇತುವೆ ತಡೆಗೋಡೆ ಒಟ್ಟು 2.5 ಅಡಿ ಎತ್ತರವಿದ್ದು, ಇದರ ಮೇಲೆ 3 ಅಡಿ ಕಬ್ಬಿಣದ ತಡೆಬೇಲಿ ನಿರ್ಮಣವಾಗಲಿದೆ. ಒಂದೊಂದು ಬ್ಲಾಕ್‌ಗಳು ಸುಮಾರು 12 ಅಡಿ ಉದ್ದವಿದ್ದು, ಇದರ ಜೋಡಣೆ ಕಾರ್ಯ ಸೇತುವೆ ಮೇಲ್ಭಾಗದಲ್ಲಿ ನಡೆಯಲಿದೆ. ಈ ಬ್ಲಾಕ್‌ಗಳ ಮೇಲ್ಭಾಗಕ್ಕೆ 1.5 ಅಡಿ ಎತ್ತರದಲ್ಲಿ ಮುಳ್ಳಿನ ಸರಿಗೆ ಎಳೆಯಲು ಯೋಜನೆ ರೂಪಿಸಲಾಗಿದೆ. ಇದರಿಂದ ಈಗ ಇರುವ ತಡೆಗೋಡೆ ಮೇಲೆ 4.5 ಅಡಿ ಎತ್ತರದ ತಡಬೇಲಿ ನಿರ್ಮಾಣವಾಗಲಿದೆ.

    Share Information
    Advertisement
    Click to comment

    You must be logged in to post a comment Login

    Leave a Reply