LATEST NEWS
ಮಂಗಳೂರಿನಲ್ಲೊಂದು ಅಮಾನವೀಯ ಘಟನೆ; ತಂದೆಯನ್ನ ಬೆತ್ತಲೆಯಾಗಿ ರಸ್ತೆಗೆ ಎಸೆದು ಹೋದ ಮಗ
ಮಂಗಳೂರು ಜೂನ್ 29: ಮಗನೊಬ್ಬ ತಂದೆಯನ್ನ ಬೆತ್ತಲೆಯಾಗಿ ರಸ್ತೆಗೆ ಎಸೆದು ಹೋದ ಅಮಾನವೀಯ ಘಟನೆ ಮಂಗಳೂರಿನ ದೇರಳಕಟ್ಟೆ ಬಳಿ ನಡೆದಿದೆ.
ಮುಂಬೈ ನಿವಾಸಿಯಾಗಿರುವ ತಂದೆ ಮಗ ಕಳೆದ 15 ದಿನಗಳಿಂದ ದೇರಳಕಟ್ಟೆಯ ಲಾಡ್ಜ ಒಂದರಲ್ಲಿ ತಂಗಿದ್ದರು. ಲಾಡ್ಜ್ ಮುಂಭಾಗದಲ್ಲಿರುವ ಖಾಸಗಿ ಆಸ್ಪತ್ರೆಯಲ್ಲಿ ತಂದೆಗೆ ಚಿಕಿತ್ಸೆ ನೀಡಲಾಗುತ್ತಿತ್ತು ಎಂದು ಹೇಳಲಾಗಿದೆ. ಆದರೆ ಇಂದು ಮಗ ಏಕಾಏಕಿ ತಂದೆಯನ್ನು ಬೆತ್ತಲೆಯಾಗಿ ಲಾಡ್ಜ್ ನಿಂದ ಎಳೆದುಕೊಂಡು ಬಂದು ರಸ್ತೆಯಲ್ಲಿ ಬಿಟ್ಟು ಪರಾರಿಯಾಗಿದ್ದಾರೆ.
ಮಗ ತಂದೆಯನ್ನು ಎಳೆದುಕೊಂಡು ಬರುತ್ತಿರುವ ದೃಶ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ.ಸ್ಥಳೀಯರಿಂದ ವಯೋ ವೃದ್ದನ ರಕ್ಷಿಸಿ ಚಿಕಿತ್ಸೆ ನೀಡಿದ್ದಾರೆ.
You must be logged in to post a comment Login