Connect with us

    DAKSHINA KANNADA

    ಸಾಲಬಾಧೆ , ಪುತ್ತೂರಿನ ಕೃಷಿಕ ಆತ್ಮಹತ್ಯೆ

    ಸಾಲಬಾಧೆ , ಪುತ್ತೂರಿನ ಕೃಷಿಕ ಆತ್ಮಹತ್ಯೆ

    ಪುತ್ತೂರು, ಅಕ್ಟೋಬರ್ 10: ಸಾಲಬಾಧೆ ತಾಳಲಾರದೆ ಕೃಷಿಕನೋರ್ವ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ದಕ್ಷಿಣಕನ್ನಡ ಜಿಲ್ಲೆಯಲ್ಲಿ ನಡೆದಿದೆ.

    ಕಡಬ ತಾಲೂಕಿನ ಕೊಯಿಲಾ ಗ್ರಾಮದ ಒಕೆಕೊಲ್ಯಾ ನಿವಾಸಿ ಕುಶಾಲಪ್ಪ ಗೌಡ (53) ಆತ್ಮಹತ್ಯೆ ಮಾಡಿಕೊಂಡ ಕೃಷಿಕರಾಗಿದ್ದಾರೆ.

    ಕೃಷಿಗಾಗಿ ಕುಶಾಲಪ್ಪ ಗೌಡ ಸಹಕಾರಿ ಹಾಗೂ ರಾಷ್ಟ್ರೀಯ ಬ್ಯಾಂಕ್ ಗಳಿಂದ ಸುಮಾರು 3 ಲಕ್ಷಕ್ಕೂ ಮಿಕ್ಕಿದ ಸಾಲ ಮಾಡಿಕೊಂಡಿದ್ದರು.

    ಆದರೆ ಈ ಬಾರಿ ಅಡಿಕೆಗೆ ಕೊಳೆರೋಗ ಸೇರಿದಂತೆ ವಿವಿಧ ಸಮಸ್ಯೆಗಳಿಂದಾಗಿ ಬೆಳೆ ಸಂಪೂರ್ಣ ನಾಶವಾಗಿತ್ತು.

    ಈ ಹಿನ್ನಲೆಯಲ್ಲಿ ಸಾಲದ ಹೊರೆ ತಾಳಲಾರದೆ ಆತ್ಮಹತ್ಯೆಗೆ ಶರಣಾಗಿದ್ದಾರೆ ಎನ್ನಲಾಗಿದೆ.

    ಕೃಷಿ ತೋಟಕ್ಕೆ ನೀರಿಗಾಗಿ ಇತ್ತೀಚೆಗೆ ಕೊಳವೆ ಬಾವಿಯೊಂದನ್ನು ಕುಶಾಲಪ್ಪ ಗೌಡ ತೋಡಿದ್ದರು.

    ಆದರೆ ಕೊಳವೆ ಬಾವಿಗೆ ಪಂಪ್ ಹಾಕಿಸಿಕೊಳ್ಳಲೂ ಅವರಲ್ಲಿ ಹಣವಿರಲಿಲ್ಲ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.

    ಒಂದೆಡೆ ರಾಜ್ಯ ಸರಕಾರ ಸಾಲಮನ್ನಾ ಘೋಷಿಸಿದ್ದರೂ, ಅದರ ಫಲಾನುಭವಿಯಾಗಲು ಸರಕಾರ ವಿಧಿಸಿರುವ ಶರತ್ತುಗಳು ಕೃಷಿಕರಿಗೆ ಕಂಟಕವಾಗುತ್ತಿರುವ ಮಧ್ಯೆಯೇ ಅಡಿಕೆ ಬೆಳೆಗಾರರೊಬ್ಬರು ಆತ್ಮಹತ್ಯೆಗೆ ಶರಣಾಗಿದ್ದಾರೆ.

    Share Information
    Advertisement
    Click to comment

    You must be logged in to post a comment Login

    Leave a Reply