Connect with us

    LATEST NEWS

    ಬ್ಯಾಂಕ್ ಗಳ ವಿಲೀನ ನಿರ್ಧಾರದಿಂದ ಕರಾವಳಿಯ ಬ್ಯಾಂಕಿಂಗ್ ಚರಿತ್ರೆಗೆ ಧಕ್ಕೆಯಾಗಿದೆ – ವೀರಪ್ಪ ಮೊಯಿಲಿ

    ಬ್ಯಾಂಕ್ ಗಳ ವಿಲೀನ ನಿರ್ಧಾರದಿಂದ ಕರಾವಳಿಯ ಬ್ಯಾಂಕಿಂಗ್ ಚರಿತ್ರೆಗೆ ಧಕ್ಕೆಯಾಗಿದೆ – ವೀರಪ್ಪ ಮೊಯಿಲಿ

    ಉಡುಪಿ ಅಗಸ್ಟ್ 31: ಸಾರ್ವಜನಿಕ ಬ್ಯಾಂಕ್ ಗಳ ವಿಲೀನ ಪ್ರಧಾನಿ‌ ಮೋದಿಯ ಆತುರದ ನಿರ್ಧಾರವಾಗಿದ್ದು ಈ ವಿಲೀನ ನಿರ್ಧಾರದಿಂದ ಕರಾವಳಿಯ ಬ್ಯಾಂಕಿಂಗ್ ಚರಿತ್ರೆಗೆ ಧಕ್ಕೆಯಾಗಿದೆ ಎಂದು ಮಾಜಿ ಕೇಂದ್ರ ಸಚಿವ ವೀರಪ್ಪ ಮೊಯಿಲಿ ಆರೋಪಿಸಿದ್ದಾರೆ.

    ಉಡುಪಿಯಲ್ಲಿ ಮಾತನಾಡಿದ ಅವರು ಪ್ರಧಾನಿ ನರೇಂದ್ರ ಮೋದಿಯವರು ರಾತ್ರಿ ನಿರ್ಧಾರ ಮಾಡ್ತಾರೆ, ಬೆಳಿಗ್ಗೆ ಅದನ್ನು ಘೋಷಣೆ ಮಾಡ್ತಾರೆ. ಕಾಶ್ಮೀರ ವಿಚಾರದಲ್ಲೂ ಪ್ರಧಾನಿ ಆತುರದ ನಿರ್ಧಾರ ಮಾಡಿದ್ದು, ಈಗ ಬ್ಯಾಂಕ್ ಗಳ ವಿಷಯದಲ್ಲೂ ಆತುರ ನಿರ್ಧಾರ ಮಾಡಿದ್ದಾರೆ ಎಂದು ಹೇಳಿದರು.

    ದಕ್ಷಿಣಕನ್ನಡ ಜಿಲ್ಲೆ ಬ್ಯಾಂಕ್ ಗಳ ತೊಟ್ಟಿಲಾಗಿದ್ದು, ಅವಿಭಜಿತ ಜಿಲ್ಲೆಗಳು ನಾಲ್ಕು ಬ್ಯಾಂಕ್ ಗಳ ತವರಾಗಿದೆ. ಜಿಲ್ಲೆಯ ವಿಜಯ ಬ್ಯಾಂಕ್ ವಿಲೀನ ಆಗಿದ್ದು, ಈಗ ಕೆನರಾ, ಸಿಂಡಿಕೇಟ್ ಕಾರ್ಪೋರೇಷನ್ ಬ್ಯಾಂಕ್ ಸರದಿ ಎಂದರು. ಬ್ಯಾಂಕ್ ವಿಲೀನದ ಸಾಧಕ ಬಾಧಕ ಚರ್ಚೆ ಮಾಡಿಲ್ಲ, ಈ ಎಲ್ಲಾ ಬ್ಯಾಂಕ್ ಗಳಿಗೂ ಒಂದು ಅಸ್ಮಿತೆ ಇದೆ. ಬಡ ಜನರಿಗೆ ಸೇವೆ ಕೊಡುವ ಉದ್ದೇಶದಿಂದ ಆರಂಭವವಾದ ಬ್ಯಾಂಕ್, ವಿಲೀನದ ಮೂಲಕ ಜನರಿಂದ ಬ್ಯಾಂಕ್ ಗಳನ್ನು ದೂರ ಕೊಂಡೊಯ್ಯಲಾಗುತ್ತಿದೆ ಎಂದು ವೀರಪ್ಪ ಮೊಯಿಲಿ ಆರೋಪಿಸಿದರು.

    ಸಾರ್ವಜನಿಕ ಬ್ಯಾಂಕ್ ಗಳನ್ನು ವಿಲೀನ ಮಾಡುವ ಮೂಲಕ ದೊಡ್ಡ ಬ್ಯಾಂಕ್ ಮಾಡ್ತೇವೆ ಅಂತಾರೆ, ಆದರೆ ಈ ಈ ಬ್ಯಾಂಕ್ ಗಳು ಇನ್ನು ಕೂಡ ಹಳ್ಳಿಗಳಿಗೆ ತಲುಪಿಲ್ಲ, ಕೇವಲ ದೊಡ್ಡ ಉದ್ಯಮಿಗಳಿಗೆ ಸಾಲ ಕೊಡಲು ದೊಡ್ಡ ಬ್ಯಾಂಕ್ ಮಾಡಿದಾರೆ. ಮುಂದೆ ನಮ್ಮ ಬ್ಯಾಂಕ್ ಗಳನ್ನು ಹೊರದೇಶದ ಬ್ಯಾಂಕ್ ಗಳಿಗೆ ವಿಲೀನ ಮಾಡ್ತಾರೆ ಎಂದರು.

    ಪವಿತ್ರವಾದ ರಿಸರ್ವ್ ಬ್ಯಾಂಕ್ ದೇಶದ ಆರ್ಥಿಕತೆಯ ಬುನಾದಿಯಾಗಿದ್ದು, ಇವತ್ತು ರಿಸರ್ವ್ ಫಂಡ್ ನ್ನೇ ಕೇಂದ್ರ ಪಡೆದಿದೆ. ಆರ್ಥಿಕ ತುರ್ತುಪರಿಸ್ಥಿತಿ ಇದ್ದಾಗ ಮಾತ್ರ ಹೀಗೆ ಮಾಡ್ತಾರೆ ಈಗ ದೇಶದಲ್ಲಿ ಅಘೊಷಿತ ಆರ್ಥಿಕ ತುರ್ತು ಪರಿಸ್ಥಿತಿ ಉಂಟಾಗಿದೆ ಎಂದರು.

    Share Information
    Advertisement
    Click to comment

    You must be logged in to post a comment Login

    Leave a Reply