ಮಂಗಳೂರು ಜನವರಿ 28: ಇವಿ ಆಟೋಗಳಿಗೆ ಪರವಾನಿಗೆ ಪಡೆಯಬೇಕು ಹಾಗೂ ವಲಯ ಸ್ಟಿಕ್ಕರ್ ಹಾಕಲು ಆರ್ ಟಿಓ ನೀಡಿರುವ ಆದೇಶದ ವಿರುದ್ದ ಇವಿ ಆಟೋ ಚಾಲಕರು ಗರಂ ಆಗಿದ್ದಾರೆ. ಹೊಸ ಆದೇಶದಿಂದ ಇವಿ ಆಟೋ ಚಾಲಕರ ಸ್ಥಿತಿ ಅಂತ್ರವಾಗಿದೆ ಎಂದು ಎಂದು ಗ್ರೀನ್ ಸಿಟಿ ರಿಕ್ಷಾ ಚಾಲಕರ ಸಂಘದ ಅಧ್ಯಕ್ಷರಾದ ಪ್ರಜೇಶ್ ಹೇಳಿದ್ದಾರೆ.

ಮಂಗಳೂರಿನಲ್ಲಿ ಮಾತನಾಡಿದ ಅವರು ಈ ಹಿಂದೆ ಇದ್ದ ದಕ್ಷಿಣ ಕನ್ನಡದ ಜಿಲ್ಲಾಧಿಕಾರಿಗಳಾದ ಮುಲೈ ಮುಗಿಲನ್ ಇವಿ ರಿಕ್ಷಾಗಳಿಗೆ ದಕ್ಷಿಣ ಕನ್ನಡದಲ್ಲಿ ಮುಕ್ತ ಸಂಚಾರ ಮಾಡಬಹುದೆಂದು ಆದೇಶ ಹೊರಡಿಸಿದ್ದರು . ಈ ಕಾರಣದಿಂದಲೇ ನಾವು ಹಳೆಯ ರಿಕ್ಷಾವನ್ನು ಮಾರಿ, ಬ್ಯಾಂಕ್ ನಲ್ಲಿ ಸಾಲ ಮಾಡಿ ಇ ವಿ ಆಟೋವನ್ನು ಖರೀದಿಸಿದೆವು ಆದರೆ ಇತ್ತೀಚಿಗೆ ಹೊಸದಾಗಿ ಬಂದ ಜಿಲ್ಲಾಧಿಕಾರಿಗಳು ಗ್ರಾಮಾಂತರ ಭಾಗದವರು ನಗರಕ್ಕೆ ಬಂದು ಬಾಡಿಗೆ ಮಾಡಬಾರದೆಂದು ಹೊಸ ಆದೇಶವನ್ನು ಹೊಸ ನಿಯಮ ಬಂದು ಆರು ತಿಂಗಳು ಮುಗಿಯುವುದರೊಳಗೆ ಹೊರಡಿಸಿದ್ದಾರೆ ಇದರಿಂದ ಚಾಲಕರ ಸ್ಥಿತಿ ಅತಂತ್ರವಾಗಿದೆ ಎಂದರು.
ಈ ಮೊದಲು ಸಾರಿಗೆ ಇಲಾಖೆ ನೀಡಿರುವ ಉಚಿತ ಪರವಾನಿಗೆ ಕಾಳಸಂತೆಯಲ್ಲಿ 2 ರಿಂದ 3 ಲಕ್ಷ ಕೊಟ್ಟು ಖರೀದಿ ಮಾಡುತ್ತಾರೆ , ವಲಯ ವಿಂಗಡಣೆ ಮಾಡಿ ಮತ್ತೆ ಪರವಾನಿಗೆ ದಂಧೆ ಆರಂಭವಾಗಿದೆ . ಶೀಘ್ರವೇ ಈ ನೀತಿಯಲ್ಲಿ ತಿದ್ದುಪಡಿ ತರುವಂತೆ ಅವರು ಆಗ್ರಹಿಸಿದರು . ಅಲ್ಲದೆ ಪತ್ರಿಕಾಗೋಷ್ಠಿಯಲ್ಲೇ ಪರವಾನಿಗೆ ಕಾಳಸಂತೆಯಲ್ಲಿ ಎಷ್ಟು ಲಕ್ಷಕ್ಕೆ ಪರವಾನಿಗೆ ಆಗುತ್ತೆ ಎಂಬುದಾಗಿ ರಿಯಾಲಿಟಿ ಚೆಕ್ ಮಾಡಿದ ಅವರು ನೇರವಾಗಿ ಬ್ರೋಕರ್ ಗೆ ಕರೆಯನ್ನು ಮಾಡುತ್ತಾರೆ . ಈ ಸಂದರ್ಭದಲ್ಲಿ ಬ್ರೋಕರ್ ಅದರಲ್ಲಿ ಪರವಾನಿಗೆಗೆ 3.20 ಲಕ್ಷ ಇದೆ ಎಂದು ಉತ್ತರವನ್ನು ನೀಡುತ್ತಾರೆ .