Connect with us

    DAKSHINA KANNADA

    ಈಜಲು ಹೋದ ಮೂವರು ಇಂಜಿನಿಯರಿಂಗ್ ಕಾಲೇಜು ವಿದ್ಯಾರ್ಥಿಗಳು ನೀರುಪಾಲು

    ಮಂಗಳೂರು, ಸೆಪ್ಟೆಂಬರ್ 04 :ನದಿಗೆ ಈಜಲು ತೆರಳಿದ ಕಾಲೇಜು ವಿದ್ಯಾರ್ಥಿಗಳು ನೀರುಪಾಲದ ಘಟನೆ ಮಂಗಳೂರಿನ ಕೊಣಾಜೆ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಸಂಭವಿಸಿದೆ. ಮಂಗಳೂರಿನ ವಳಚ್ಚಿಲ್ ಶ್ರೀನಿವಾಸ ಕಾಲೇಜಿನ ಎಂಟು ಮಂದಿ ವಿದ್ಯಾರ್ಥಿಗಳು ಇಂದು ಅಪರಾಹ್ನ  ಕೊಣಾಜೆ ಸಮೀಪದ ಮುಡಿಪು ಇನ್ನೊಳಿ ಸಮೀಪ ನಡುಗುಡ್ಡೆ ಎಂಬಲ್ಲಿ ನದಿಗೆ ಈಜಲು ತೆರಳಿದ್ದಾರೆ.ಈ ಸಂದರ್ಭದಲ್ಲಿ 8 ಮಂದಿ ವಿದ್ಯಾರ್ಥಿಗಳು ನೀರಿಗೆ ಇಳಿದಿದ್ದಾರೆ. ಇದರಲ್ಲಿ ಮೂವರು ವಿದ್ಯಾರ್ಥಿಗಳು ನೀರುಪಾಲಾಗಿದ್ದಾರೆ.

    ನೀರುಪಾಲಾದವರು ಬಿಹಾರದ ಸುಹಾನ್, ಚಿತ್ರದುರ್ಗದ ಶ್ರೀ ರಾಮ್, ಬೆಳ್ತಂಗಡಿಯ ವಿಖಿಲ್ ಎಂದು ಗುರುತಿಸಲಾಗಿದೆ. ಈ ಮಧ್ಯೆ ಸತತ 1ಘಂಟೆಯ ಕಾರ್ಯಾಚರಣೆಯಲ್ಲಿ ವಿಖಿಲ್ ನ ಶವವನ್ನು ಮೇಲೆತ್ತಿದ್ದಾರೆ. ಉಳಿದವರಿಗಾಗಿ ಶೋಧಾ ಕಾರ್ಯ ಮುಂದುವರೆದಿದ್ದು ಅಗ್ನಿಶಾಮಕ ದಳ,ಪೋಲಿಸ್ ಸಿಬಂದಿಗಳು ಸ್ಥಳೀಯರೊಂದಿಗೆ ಉಳಿದವರ ಶವಗಳಿಗಾಗಿ ಹುಡುಕಾಟ ಮುಂದುವರೆಸಿದ್ದಾರೆ.

    ಇತರ 5 ಮಂದಿಯನ್ನು ಸ್ಥಳೀಯರು ರಕ್ಷಿಸಿದ್ದಾರೆ. ಇವರೆಲ್ಲರೂ ವಳಚ್ಚಿಲ್ ಶ್ರೀನಿವಾಸ ಇಂಜಿನಿಯರಿಂಗ್ ಕಾಲೇಜಿನ 5 ನೇ ಸೆಮಿಸ್ಟರ್ ವಿದ್ಯಾರ್ಥಿಗಳಾಗಿದ್ದಾರೆ ಎಂದು ತಿಳಿದು ಬಂದಿದೆ. ಕೊಣಾಜೆ ಪೋಲಿಸರು ಪ್ರಕರಣ ದಾಖಲಿಸಿದ್ದಾರೆ.

    Share Information
    Advertisement
    Click to comment

    You must be logged in to post a comment Login

    Leave a Reply