Connect with us

    LATEST NEWS

    ಶಿರೂರು ಸ್ವಾಮೀಜಿ ಅಸಹಜ ಸಾವಿನ ಪ್ರಕರಣ – ನಾಪತ್ತೆಯಾದ ಡಿವಿಆರ್ ಪತ್ತೆ ?

    ಶಿರೂರು ಸ್ವಾಮೀಜಿ ಅಸಹಜ ಸಾವಿನ ಪ್ರಕರಣ – ನಾಪತ್ತೆಯಾದ ಡಿವಿಆರ್ ಪತ್ತೆ ?

    ಉಡುಪಿ ಜುಲೈ 25: ಶಿರೂರು ಸ್ವಾಮೀಜಿ ಅಸಹಜ ಸಾವಿನ ಪ್ರಕರಣದಲ್ಲಿ ನಾಪತ್ತೆಯಾಗಿರುವ ಸಿಸಿಟಿವಿಯ ಡಿವಿಆರ್ ಸ್ವರ್ಣಾ ನದಿಯಲ್ಲಿ ಪತ್ತೆಯಾಗಿದೆ ಎಂದು ಹೇಳಲಾಗಿದೆ.

    ಶಿರೂರು ಶ್ರೀ ಲಕ್ಷ್ಮೀವರ ತೀರ್ಥ ಸ್ವಾಮಿಜಿ ಅವರ ಅಸಹಜ ಸಾವಿನ ತನಿಖೆಯ ನಡೆಸುತ್ತಿರುವ ಪೊಲೀಸರು ಶಿರೂರು ಮಠದಿಂದ ನಾಪತ್ತೆಯಾದ ಡಿವಿಆರ್ ಗಾಗಿ ಸ್ವರ್ಣಾ ನದಿಯಲ್ಲಿ ಮಂಗಳವಾರ ಸಂಜೆಯಿಡೀ ಹುಡುಕಾಟ ನಡೆಸಿದ್ದರು. ಇಂದು ಮುಂಜಾನೆಯ ವೇಳೆ ಡಿವಿಆರ್ ಸಿಕ್ಕಿರುವ ಸಾಧ್ಯತೆ

    ಶಿರೂರು ಮೂಲ ಮಠದ ಬಳಿಯ ಸ್ವರ್ಣಾ ನದಿಯಲ್ಲಿ ತೆಪ್ಪದಲ್ಲಿ ಕುಳಿತು ನದಿ ನೀರಿನಲ್ಲಿ ಡಿವಿಆರ್ ಗಾಗಿ ಹುಡುಕಾಟ ನಡೆಸಲಾಗಿತ್ತು. ಅಯಸ್ಕಾಂತ ನೀರಿಗೆಸೆದು ಡಿವಿಆರ್ ಮೇಲಕ್ಕೆಳೆಯಲು ಪ್ರಯತ್ನಿಸಲಾಗಿದ್ದು, ಅಲ್ಲದೆ ಮುಳುಗು ತಜ್ಞರ ನ್ನು ಬಳಸಿ ಡಿವಿಆರ್ ಪಡೆಯಲು ಯಶಸ್ವಿಯಾಗಿದ್ದಾರೆ ಎಂದು ಹೇಳಲಾಗಿದೆ.

    ಈ ನಡುವೆ ಸಿಸಿಟಿವಿಯ ಡಿವಿಆರ್ ನ್ನು ಸ್ವರ್ಣಾ ನದಿಗೆ ಎಸೆದವರ್ಯಾರು ಎಂಬ ಪ್ರಶ್ನೆ ಕುತೂಹಲ ಮೂಡಿಸಿದೆ. ಸಿಸಿಟಿವಿ ಡಿವಿಆರ್ ಕದ್ದವರು ಯಾರು ಎಂಬ ಬಗ್ಗೆ ಕುತೂಹಲ ಹೆಚ್ಚುತ್ತಿದ್ದು, ಶಿರೂರು ಶ್ರೀಗಳ ಅಸಹಜ ಸಾವಿನ ಪ್ರಕರಣ ದಿನದಿಂದ ದಿನಕ್ಕೆ ಕುತೂಹಲಕಾರಿ ತಿರುವು ಪಡೆಯುತ್ತಿದೆ.

    ಶಿರೂರು ಶ್ರೀಗಳ ಅಸಹಜ ಸಾವಿನ ನಂತ ಶೀರೂರು ಮೂಲಮಠದ ಸಿಸಿ ಕೆಮರಾ ಡಿವಿಆರ್ ಧಿಡೀರ್ ನಾಪತ್ತೆಯಾಗಿತ್ತು, ಸ್ವಾಮೀಜಿಯ ನಿಕಟವರ್ತಿಗಳೇ ಎಸೆದಿರುವ ಸಾಧ್ಯತೆ ಇದೆ ಎಂದು ಸಂಶಯಿಸಲಾಗಿದೆ.

    Share Information
    Advertisement
    Click to comment

    You must be logged in to post a comment Login

    Leave a Reply