Connect with us

    LATEST NEWS

    ಕುದ್ಮುಲ್‌ ಗಾರ್ಡನ್‌ ಬಳಿ ಒಳಚರಂಡಿ ಕಾಮಗಾರಿಗೆ ಶಾಸಕ ಕಾಮತ್‌ ಚಾಲನೆ

    ಮಂಗಳೂರು: ಕುದ್ಮುಲ್‌ ಗಾರ್ಡನ್‌ ಗಗನದೀಪ್ ಅಪಾರ್ಟ್‌ಮೆಂಟ್‌ ಬಳಿ ಒಳಚರಂಡಿ ಕಾಮಗಾರಿಗೆ ಮಂಗಳೂರು ದಕ್ಷಿಣ ಕ್ಷೇತ್ರದ ಶಾಸಕ ಡಿ. ವೇದವ್ಯಾಸ ಕಾಮತ್‌ ಅವರು ಇಂದು (ಫೆ.23) ಶಿಲಾನ್ಯಾಸ ನೆರವೇರಿಸಿದರು.


    ಇಲ್ಲಿ ಹಲವು ವರ್ಷಗಳಿಂದ ಇದ್ದ ವ್ಯವಸ್ಥಿತ ಒಳಚರಂಡಿ ನಿರ್ಮಾಣದ ಬೇಡಿಕೆಯನ್ನು ಲೋಕೋಪಯೋಗಿ ಇಲಾಖೆಯ ಅನುದಾನದೊಂದಿಗೆ ಈಡೇರಿಸಲಾಗುತ್ತಿದೆ. ಕಾಮಗಾರಿಗಳು ಸಣ್ಣವು, ದೊಡ್ಡವು ಎಂಬ ಭೇದವಿಲ್ಲದೆ ಜನರಿಗೆ ಅನುಕೂಲ ಒದಗಿಸಿಕೊಡಲು ಮತ್ತು ಸರ್ವಾಂಗೀಣ ಅಭಿವೃದ್ಧಿಯ ದೃಷ್ಟಿಯಿಂದ ಯಾವುದೇ ತಾರತಮ್ಯವಿಲ್ಲದೆ ಆದ್ಯತೆ ನೀಡಲಾಗುತ್ತಿದೆ ಎಂದು ಶಾಸಕರು ಈ ಸಂದರ್ಭದಲ್ಲಿ ನುಡಿದರು. ಲೋಕೇಶ್‌ ಗುತ್ತಿಗೆದಾರ ಅವರು ಈ ಕಾಮಗಾರಿಯನ್ನು ನಡೆಸಿಕೊಡುತ್ತಾರೆ ಎಂದು ಶಾಸಕರು ತಿಳಿಸಿದರು.

     

     

    Share Information
    Advertisement
    Click to comment

    You must be logged in to post a comment Login

    Leave a Reply