Connect with us

    LATEST NEWS

    ಪ್ರಮೋದ್ ಮಧ್ವರಾಜ್ ಎಲ್ಲಿ ನಿಂತ್ರೂ ಸೋಲಿಸಿ – ಡಿಕೆ ಶಿವಕುಮಾರ್

    ಉಡುಪಿ ಜನವರಿ 22: ಮಾಜಿ ಶಾಸಕ ಪ್ರಮೋದ್ ಮಧ್ವರಾಜ್ ನಂಬಿಕೆ ದ್ರೋಹ ಮಾಡಿದ್ದು, ಅವರು ಯಾವುದೇ ಜಾಗದಲ್ಲೂ ನಿಂತ್ರು ಪ್ರಮೋದ್ ಮಧ್ವರಾಜ್ ನ ಸೊಲಿಸಿ‌ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.


    ಉಡುಪಿಯಲ್ಲಿ ಪ್ರಜಾಧ್ವನಿ ಸಮಾವೇಶದಲ್ಲಿ ಮಾತಾನಾಡಿದ ಅವರು, “ಪ್ರಮೋದ್ ಮಧ್ವರಾಜ್‌ಗೆ ಮಂತ್ರಿ ಮಾಡಿದೆವು. ದ್ರೋಹ ಮಾಡಿ ಬಿಜೆಪಿಗೆ ಹೋದ್ರು, ಆದರೆ ಒಬ್ಬನೇ ಕಾರ್ಯಕರ್ತ ಹೋಗಿಲ್ಲ.ಇದಕ್ಕಾಗಿ ನಾನು ಎಲ್ಲಾ ಕಾರ್ಯಕರ್ತರಿಗೆ ಅಭಿನಂಧನೆ ಸಲ್ಲಿಸುತ್ತೇನೆ. ತಂದೆ, ತಾಯಿ, ಮಗನನ್ನು ಶಾಸಕ ಮಂತ್ರಿ ಮಾಡಿದ್ದು ಕಾಂಗ್ರೆಸ್‌ ಪಕ್ಷ, ನಿಮಗೆ ಇನ್ನೇನು ಮಾಡಬೇಕು? ಬಿಜೆಪಿ ಟಿಕೆಟ್ ಕೊಡುತ್ತೋ? ಇಲ್ವೋ ಗೊತ್ತಿಲ್ಲ, ಆದರೆ ಅವರು ಯಾವುದೇ ಪಕ್ಷದಿಂದ ಚುನಾವಣೆಗೆ ನಿಂತರೂ ನೀವು ಅವರನ್ನು ಸೋಲಿಸಬೇಕು” ಎಂದರು.


    ಜನರಿಗೆ ಬದಲಾವಣೆ ಬೇಕಾಗಿದೆ. ಮಹಿಳೆಯರಿಗೆ ಎರಡು ಸಾವಿರ ನೀಡಲು ತೀರ್ಮಾನ ಮಾಡಿದ್ದೇವೆ. ನಂತರ ಬಿಜೆಪಿ ಯವರು ಹೇಳ್ತಾರೆ ಇದನ್ನು ನಾವೂ ಮಾಡುತ್ತೇವೆ ಎಂದು. ಇದನ್ನು ಯಾಕೆ ಮೊದಲು ಘೋಷಿಸಿಲ್ಲ ಎಂದು ಪ್ರಶ್ನಿಸಿದ್ದಾರೆ.

     

    Share Information
    Advertisement
    Click to comment

    You must be logged in to post a comment Login

    Leave a Reply