ಮಂಗಳೂರು ಜೂನ್ 16: ಆರ್ ಎಸ್ಎಸ್ ನೊಂದಣಿ ಬಗ್ಗೆ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರ ಹೇಳಿಕೆ ಸರಿ ಇದೆ. ನೂರು ವರ್ಷ ಇತಿಹಾಸ ಇರುವ ಸಂಸ್ಥೆ ನೊಂದಣಿ ಮಾಡಿಕೊಳ್ಳುವುದಿಲ್ಲ ಎಂಬ ಹಠ ಯಾಕೆ ಎಂದು ಪ್ರಶ್ನಿಸಿದ್ದಾರೆ.

ಮಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಯಾವುದೇ ಸಂಘಟನೆಯು ಸಾರ್ವಜನಿಕ ಕ್ಷೇತ್ರದಲ್ಲಿ ತೊಡಗಿಸಿಕೊಂಡಾಗ ಅದರ ಚಟುವಟಿಕೆಗಳಲ್ಲಿ ಪಾರದರ್ಶಕತೆ ಮತ್ತು ಉತ್ತರದಾಯಿತ್ವ ಇರಬೇಕು. ಈ ನಿಟ್ಟಿನಲ್ಲಿ ಆರ್ಎಸ್ಎಸ್ ಕೂಡ ನೋಂದಣಿ ಪ್ರಕ್ರಿಯೆಗೆ ಒಳಪಟ್ಟರೆ ಉತ್ತಮ ಎಂದು ಹೇಳಿದರು. ವಿದೇಶ ಹಣಗಳು ಸಂಘ ಸಂಸ್ಥೆಗಳಿಗೆ ಬರುತ್ತದೆ. ಅದಕ್ಕೆ ಲೆಕ್ಕ ಕೊಡಬೇಕಲ್ಲ. ಹಾಗಾಗಿ ಗೃಹ ಸಚಿವರು ಆರ್ ಎಸ್ ಎಸ್ ನೊಂದಣಿ ಬಗ್ಗೆ ಕೇಳಿದ್ದು ಸರಿ ಇದೆ. ನೊಂದಣಿ ಮಾಡಿಸಿದರೆ ಸಂಸ್ಥೆಗೆ ಮಹತ್ವ ಬರುತ್ತದೆ. ಅದು ಬಿಟ್ಟು ನೂರು ವರ್ಷ ಇತಿಹಾಸ ಇರುವ ಸಂಸ್ಥೆ ನೊಂದಣಿ ಮಾಡಿಕೊಳ್ಳುವುದಿಲ್ಲ ಎಂಬ ಹಠ ಯಾಕೆ ಎಂದು ಪ್ರಶ್ನಿಸಿದ್ದಾರೆ.