Connect with us

    LATEST NEWS

    ದಿನಕ್ಕೊಂದು ಕಥೆ- ನೋವು

    ನೋವು

    ನಾನೀಗ ಬಿಡುವಾಗಿದ್ದೇನೆ . ಮೊದಲಾದರೆ ಹೊಟ್ಟೆ ತುಂಬಿ ಹೋಗುತ್ತಿತ್ತು. ಈಗ ತಿಂಗಳು ಕಾದರೂ ಒಂದೆರಡು ಅಗುಳು ಹೊಟ್ಟೆಗೆ ಇಳಿಯುತ್ತದೆ. ಮೊದಲು ಭೇಟಿಯಾಗಲು ಬರುವ ಮನಸ್ಸುಗಳು ಹಲವು ಈಗ ಜನರ ಸುಳಿವೇ ಇಲ್ಲದೆ ಜೇಡರ ಬಲೆಯನ್ನು ಆಶ್ರಯಿಸಿದ್ದೇನೆ .

    ಮೊದಲು ನನ್ನೊಳಗೆ ಹಾದುಹೋಗುತ್ತಿದ್ದ ಪ್ರೇಮದ ಮಾತುಗಳು, ವಿರಹದ ನೋವುಗಳು, ಕುಶಲೋಪರಿಯ ವಿಚಾರಗಳು, ಕೆಲಸದ ಅನುಮತಿ, ಬೇಡಿಕೆಯ ಆಗ್ರಹ, ಆರೋಗ್ಯ ವಿಚಾರಣೆ, ಹೀಗೆ ಎಲ್ಲವೂ ನನ್ನೊಳಗಿಂದ ರೆಕ್ಕೆ ಮೂಡಿಸಿಕೊಂಡು ದಿಕ್ಕುಗಳನ್ನು ಹುಡುಕುತ್ತಿತ್ತು.

    ತಾಲೂಕು ಜಿಲ್ಲೆ ,ರಾಜ್ಯಗಳಿಗೆ ಅಕ್ಷರದ ಹಕ್ಕಿ ಸುದ್ದಿಯನ್ನು ಹೊತ್ತು ಹಾರುತಿತ್ತು .ಅದಕ್ಕೆ ಪ್ರತ್ಯುತ್ತರಗಳು ನನ್ನಲ್ಲೇ ಸಿಗುತ್ತಿತ್ತು. ಕೆಲವಕ್ಕೆ ಉತ್ತರವಿಲ್ಲದಿದ್ದರೂ ಕಾಯುವ ಮನಸ್ಸುಗಳಿಗೆ ಕಡಿಮೆ ಇರಲಿಲ್ಲ . ಅಕ್ಷರಗಳ ಮಾತುಗಳು ನನಗೆ ಜನರ ನಾಡಿಮಿಡಿತವನ್ನು ತಿಳಿಸುತ್ತಿತ್ತು .ಆದರೆ ಈಗ ಅಕ್ಷರಗಳು ಮೊಬೈಲ್ ಒಳಗೆ ಇಳಿದುಬಿಟ್ಟಿದೆ.

    ಪೆನ್ನಿಗೆ ನಿರುದ್ಯೋಗವಾಗಿದೆ . ನಾನು ಒಂಟಿಯಾಗಿ ಗೋಡೆಗೆ ನೇತು ಬಿದ್ದಿದ್ದೇನೆ .ಮತ್ತೊಮ್ಮೆ ಬರಬೇಕಿದೆ ಅಕ್ಷರಗಳೊಂದಿಗೆ ಸಾಂಗತ್ಯ ಸುದ್ದಿಗೆ ರೆಕ್ಕೆ ಕಟ್ಟಿ ಹಾರಿಸುವ ಅವಕಾಶ . ಎಷ್ಟೆಂದರೂ ಲೇಖನಿ ಹಾಳೆಗಳ ಜೊತೆಗಿನ ಅಕ್ಷರದ ಬಾಂಧವ್ಯಮತ್ಯಾವಾಗ ಸಿಗುವುದೋ….

    ಧೀರಜ್ ಬೆಳ್ಳಾರೆ

    Share Information
    Advertisement
    Click to comment

    You must be logged in to post a comment Login

    Leave a Reply