ಧರ್ಮಸ್ಥಳ ಅಗಸ್ಟ್ 13: ನೂರಾರು ಶವಗಳನ್ನು ಧರ್ಮಸ್ಥಳದ ಆಸುಪಾಸಿನಲ್ಲಿ ನಾನೆ ಹೂತಿದ್ದೇನೆ ಎಂದು ಹೇಳುವ ಮೂಲಕ ಇಡೀ ದೇಶವನ್ನೇ ಬೆಚ್ಚಿಬಿಳಿಸಿದ್ದ ಅನಾಮಿಕ ದೂರುದಾರನ ಹೇಳಿಕೆಗಳು ದಿನದಿಂದ ದಿನಕ್ಕೆ ವಿಶ್ವಾಸ ಕಳೆದುಕೊಳ್ಳತೊಡಗಿದೆ.

ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂತು ಹಾಕಿದ್ದೇನೆ ಎಂದು ಹೇಳಿಕೆ ನೀಡಿ ಸಂಚಲನ ಸೃಷ್ಠಿಸಿದ್ದ ಅನಾಮಿಕ ದೂರುದಾರ. ಅವನ ಹೇಳಿಕೆ ಬೆನ್ನಲ್ಲೆ ರಾಜ್ಯ ಸರಕಾರ ಎಸ್ ಐಟಿ ತನಿಖೆಯನ್ನು ಆರಂಭಿಸಿತ್ತು. ಆದರೆ ತನಿಖೆ ಆರಂಭವಾಗಿ ಮೂರು ವಾರಗಳು ಮುಗಿಯುತ್ತಾ ಬಂದಿದ್ದು, ಈಗಾಗಲೇ 16ಕ್ಕೂ ಅಧಿಕ ಪ್ರದೇಶಗಳಲ್ಲಿ ಹೊಂಡಗಳನ್ನು ತೋಡಲಾಗಿದೆ. ಆದರೂ ಅಲ್ಲಿ ಅಂತಹ ಹೇಳಿಕೊಳ್ಳುವ ಯಾವುದೇ ಕುರುಹು ದೊರೆತಿಲ್ಲ.

ಅಲ್ಲದೆ ಶೋಧ ಕಾರ್ಯಕ್ಕೆ ಅತ್ಯಾಧುನಿಕ ತಂತ್ರಜ್ಞಾನಗ ಜಿಪಿಆರ್ ಬೇಕು ಎಂದು ಆಗ್ರಹ ಪಡಿಸಿದ್ದ ಹೋರಾಟಗಾರರು ಹೇಳಿಕೆಯಂತೆ ಧರ್ಮಸ್ಥಳದಲ್ಲಿ ಎಸ್ಐಟಿ ಶವ ಶೋಧ ಕಾರ್ಯಾಚರಣೆ ಮುಂದುವರೆಸಿತ್ತು. ಡ್ರೋನ್ ಮೌಂಟೆಡ್ ಜಿಪಿಆರ್ ಮೆಷಿನ್ ಬಳಸಿ ತಪಾಸಣೆ ನಡೆಸಿದರೂ, ದೂರುದಾರ ಸೂಚಿಸಿದ 13ನೇ ಸ್ಥಳದಲ್ಲಿ ಯಾವುದೇ ಕುರುಹು ಸಿಕ್ಕಿಲ್ಲ. ಆಧುನಿಕ ತಂತ್ರಜ್ಞಾನ ಬಳಸಿದರೂ ಶವ ಹೂತ ಕುರುಹು ಲಭ್ಯವಾಗಿಲ್ಲ. ಇದರೊಂದಿಗೆ ಇಡೀ ಪ್ರಕರಣ ಇದೀಗ ವಿಶ್ವಾಸಾರ್ಹತೆಯನ್ನೇ ಕಳೆದುಕೊಳ್ಳ ತೊಡಗಿದೆ.

ಅಲ್ಲದೆ ಇನ್ನೊಂದೆ ಧರ್ಮಸ್ಥಳ ಭಕ್ತರ ಸಹನೆಯ ಕಟ್ಟೆ ಒಡೆದಿದ್ದು, ಈಗಾಗಲೇ ಆಕ್ರೋಶ ಬರುತ್ತಿದೆ. ಧರ್ಮಸ್ಥಳ ಕ್ಷೇತ್ರದ ವಿರುದ್ಧ ಅಪಪ್ರಚಾರ ನಡೆಯುತ್ತಿದೆ ಎಂದು ಭಕ್ತರು ರೋಷಾವೇಷಗೊಂಡಿದ್ದಾರೆ. ಕ್ಷೇತ್ರದ ಮಂಜುನಾಥೇಶ್ವರ ದೇಗುಲ ಹಾಗೂ ಧರ್ಮಾಧಿಕಾರಿ ವಿರುದ್ಧ ಅಪಪ್ರಚಾರ ಮಾಡಲಾಗುತ್ತಿದೆ ಎಂಬುದು ಭಕ್ತರ ಆರೋಪ. ಇದರಿಂದ ಸಿಡಿದೆದ್ದ ಭಕ್ತರು, ಜೈನ ಸಮುದಾಯದವರು ಸೋಮವಾರ ರಾಜ್ಯದ ಹಲವೆಡೆ ಬೀದಿಗಿಳಿದು ಪ್ರತಿಭಟಿಸಿದ್ದಾರೆ, ಮುಂದಿನ ದಿನಗಳಲ್ಲಿ ಬಿಜೆಪಿಯೂ ಕೂಡ ಪ್ರತಿಭಟನೆಗೆ ಧುಮುಕಲಿದೆ. ಅಲ್ಲದೆ ದೂರುದಾರನ ಮಂಪರು ಪರೀಕ್ಷೆಗೆ ಒತ್ತಾಯ ಕೇಳಿಬಂದಿದೆ. ಈತ 30 ಜಾಗಗಳಲ್ಲಿ 300 ಶವ ಹೂತಿರುವುದಾಗಿ ದೂರು ನೀಡಿದ್ದಾನೆ. ನಿನ್ನೆ 13ನೇ ಪಾಯಿಂಟ್ ಸುತ್ತಮುತ್ತ ಜಿಪಿಆರ್ ಹಾಗೂ ಹಿಟಾಚಿ ಬಳಸಿ ಶೋಧ ನಡೆಸಲಾಗಿತ್ತು.