Connect with us

    LATEST NEWS

    ಮತ್ತೊಂದು ಬಲಿ ತೆಗೆದುಕೊಂಡ ಮಹಾಮಾರಿ ಡೆಂಗ್ಯೂ

    ಮತ್ತೊಂದು ಬಲಿ ತೆಗೆದುಕೊಂಡ ಮಹಾಮಾರಿ ಡೆಂಗ್ಯೂ

    ಮಂಗಳೂರು ಅಗಸ್ಟ್ 1: ದಕ್ಷಿಣಕನ್ನಡ ಜಿಲ್ಲೆಯಲ್ಲಿ ಮಾರಕ ರೋಗ ಡೆಂಗ್ಯೂ ಮತ್ತೊಂದು ಬಲಿ ತೆಗೆದುಕೊಂಡಿದೆ. ಮಂಗಳೂರಿನ ಯುವಕನೊಬ್ಬನನ್ನು ಮಾರಕ ಡೆಂಗ್ಯೂ ಬಲಿ ತೆಗೆದುಕೊಂಡಿದೆ.

    ಮೃತ ಯುವಕನನ್ನು ಬೋಳಾರ ಮುಳಿಹಿತ್ಲು ನಿವಾಸಿ ಕಾರ್ತಿಕ್ ಶೆಟ್ಟಿ(22) ಎಂದು ಗುರುತಿಸಲಾಗಿದ್ದು, ಕಾರ್ತಿಕ್ ಶೆಟ್ಟಿ ಡೆಂಗ್ಯೂ ಜ್ವರ ಹಿನ್ನಲೆ ಕಳೆದ ಎಂಟು ದಿನಗಳಿಂದ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಇದು ಬೆಳಿಗ್ಗೆ ಮೃತಪಟ್ಟಿದ್ದಾರೆ.

    ಈ ಮೂಲಕ ಜಿಲ್ಲೆಯಲ್ಲಿ ಡೆಂಗ್ಯೂ ಮೃತಪಟ್ಟವರ ಸಂಖ್ಯೆ ಸರಕಾರಿ ಲೆಕ್ಕದಲ್ಲಿ 5 ಆಗಿದ್ದು, ಅನಧಿಕೃತವಾಗಿ 10ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ ಎಂದು ಹೇಳಲಾಗಿದೆ.

    Share Information
    Advertisement
    Click to comment

    You must be logged in to post a comment Login

    Leave a Reply