LATEST NEWS
ನಾಪತ್ತೆಯಾದ ಮೀನುಗಾರರ ಪತ್ತೆಗೆ ಸಹಕಾರ ಕೇಂದ್ರ ರಕ್ಷಣಾ ಸಚಿವೆ
ನಾಪತ್ತೆಯಾದ ಮೀನುಗಾರರ ಪತ್ತೆಗೆ ಸಹಕಾರ ಕೇಂದ್ರ ರಕ್ಷಣಾ ಸಚಿವೆ
ಉಡುಪಿ ಜನವರಿ 3: ಉಡುಪಿ ಮಲ್ಪೆಯಿಂದ ಆಳಸಮುದ್ರ ಮೀನುಗಾರಿಕೆಗೆ ತೆರಳಿ ನಾಪತ್ತೆಯಾಗಿರುವ ಮೀನುಗಾರಿಕಾ ಬೋಟ್ ಹಾಗೂ 7 ಜನ ಮೀನುಗಾರರ ಪತ್ತೆಗೆ ಕ್ರಮ ಕೈಗೊಳ್ಳುವಂತೆ ಭಾರತೀಯ ನೌಕಾಪಡೆ ಹಾಗೂ ಕೋಸ್ಟ್ ಗಾರ್ಡ್ ಗೆ ಕೇಂದ್ರ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಸೂಚನೆ ನೀಡಿದ್ದಾರೆ.
ಇಂದು ಉಡುಪಿ ಸಂಸದೆ ಶೋಭಾ ಕರಂದ್ಲಾಜೆ ಕೇಂದ್ರ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಭೇಟಿ ಮಾಡಿ ಆಳ ಸಮುದ್ರಕ್ಕೆ ಮೀನುಗಾರಿಕೆಗೆ ತೆರಳಿ ನಾಪತ್ತೆಯಾಗಿದ್ದ ಮೀನುಗಾರರ ಪತ್ತೆಗೆ ಸಹಕಾರ ನೀಡುವಂತೆ ಮನವಿ ಸಲ್ಲಿಸಿದರು.
ಶೋಭಾ ಕರಂದ್ಲಾಜೆ ಅವರ ಮನವಿಗೆ ಸ್ಪಂಧಿಸಿದ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಮಹಾರಾಷ್ಟ್ರ ಸರಕಾರ, ಕೋಸ್ಟ್ ಗಾರ್ಡ್ ಹಾಗೂ ಭಾರತೀಯ ನೌಕಾದಳಕ್ಕೆ ನಾಪತ್ತೆಯಾದ ಮೀನುಗಾರರ ಪತ್ತೆಗೆ ಸೂಕ್ತ ಕ್ರಮಕೈಗೊಳ್ಳುವಂತೆ ಸೂಚನೆ ನೀಡಿದರು.
Met Hon Defence Minister Smt @nsitharaman in regard to the missing of fishing boat Suvarna Tribhuja and 7 fishermen from Malpe,
She directed Maharashtra govt, Coast Guard as well Indian Navy to take necessary actions to find out the missing fishermen pic.twitter.com/RvcBie7npu— Shobha Karandlaje (@ShobhaBJP) January 3, 2019
You must be logged in to post a comment Login