Connect with us

    KARNATAKA

    ನಾಯಿಗೆ ಸ್ನಾನ ಮಾಡಿಸಲು ಹೋಗಿ ಅಣ್ಣತಂಗಿ ನೀರಿನಲ್ಲಿ ಮುಳುಗಿ ಸಾವು

    ಬೆಂಗಳೂರು ಡಿಸೆಂಬರ್ 26: ಕಲ್ಲು ಕ್ವಾರಿಯಲ್ಲಿ ನಾಯಿಗೆ ಸ್ನಾನ ಮಾಡಿಸಲು ಹೋಗಿ ಅಣ್ಣ-ತಂಗಿ ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಬೆಂಗಳೂರಿನ ಬೆಟ್ಟ ಹಲಸೂರಿನ ಬಳಿ ನಡೆದಿದೆ.


    ಮೃತರನ್ನು ಜೆನ್ನಿಫರ್ (17), ಪ್ರೇಮ್ ಕುಮಾರ್ (21) ಎಂದು ಗುರುತಿಸಲಾಗಿದ್ದು. ಇವರು ಕಲ್ಲು ಕ್ವಾರಿಯಲ್ಲಿ ನಿಂತಿದ್ದ ನೀರಿನಲ್ಲಿ ನಾಯಿಗೆ ಸ್ನಾನ ಮಾಡಿಸಲು ತೆರಳಿದ್ದಾರೆ. ಈ ವೇಳೆ ಜೆನ್ನಿಫರ್ ಆಯತಪ್ಪಿ ನೀರಿನಲ್ಲಿ ಮುಳುಗಿದ್ದಾರೆ. ಈ ವೇಳೆ ತಂಗಿಯನ್ನು ಕಾಪಾಡಲು ಪ್ರೇಮ್ ಕುಮಾರ್ ನೀರಿಗೆ ಧುಮುಕಿದ್ದಾರೆ. ಆದರೆ ಇಬ್ಬರು ನೀರಿನಲ್ಲಿ ಮುಳುಗಿ ಸಾವನಪ್ಪಿದ್ದಾರೆ. ಘಟನೆ ಸ್ಥಳಕ್ಕೆ ಚಿಕ್ಕಜಾಲ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ

    Share Information
    Advertisement
    Click to comment

    You must be logged in to post a comment Login

    Leave a Reply