BELTHANGADI
ಹೊಳೆ ದಾಟುವಾಗ ಜಾರಿ ಬಿದ್ದು ಮೃತಪಟ್ಟ ವೃದ್ದನ ಮೃತದೇಹ ಪತ್ತೆ
ಹೊಳೆ ದಾಟುವಾಗ ಜಾರಿ ಬಿದ್ದು ಮೃತಪಟ್ಟ ವೃದ್ದನ ಮೃತದೇಹ ಪತ್ತೆ
ಮಂಗಳೂರು ಅಗಸ್ಟ್ 13: ನಿನ್ನೆ ಬೆಳ್ತಂಗಡಿ ತಾಲೂಕಿನ ಮರೋಡಿಯಲ್ಲಿ ನೀರುಪಾಲಾಗಿದ್ದ ವೃದ್ದನ ಮೃತ ದೇಹ ಇಂದು ಪತ್ತೆಯಾಗಿದೆ.
ಮೃತರನ್ನು 65 ವರ್ಷದ ಬೊಮ್ಮಯ್ಯದಾಸ್ ಎಂದು ಗುರುತಿಸಲಾಗಿದ್ದು, ಮೃತ ವ್ಯಕ್ತಿ ಹೊಳೆದಾಟುವ ಸಂದರ್ಭ ಕಾಲು ಜಾರಿ ಹೊಳೆಗೆ ಬಿದ್ದು ನಾಪತ್ತೆಯಾಗಿದ್ದರು. ಇಂದು ಅವರು ಮೃತ ದೇಹ ಹೊಳೆಯಲ್ಲಿ ಸಿಕ್ಕಿದ್ದು ಅಗ್ನಿ ಶಾಮಕ ದಳದ ಸಿಬ್ಬಂದಿ ಮೃತ ದೇಹವನ್ನು ಹೊಳೆಯಿಂದ ಮೇಲೆತ್ತಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ವೇಣೂರು ಪೊಲೀಸ್ ಠಾಣೆಯಲ್ಲಿ ಪಕರಣ ದಾಖಲಾಗಿದೆ.
You must be logged in to post a comment Login