LATEST NEWS
ನೇತ್ರಾವತಿ ನದಿಗೆ ಹಾರಿದ ಅಪ್ಪಮಗನ ಶವ 12 ದಿನಗಳ ನಂತರ ಉಡುಪಿಯಲ್ಲಿ ಪತ್ತೆ
ನೇತ್ರಾವತಿ ನದಿಗೆ ಹಾರಿದ ಅಪ್ಪಮಗನ ಶವ 12 ದಿನಗಳ ನಂತರ ಉಡುಪಿಯಲ್ಲಿ ಪತ್ತೆ
ಮಂಗಳೂರು ಫೆಬ್ರವರಿ 29: ಇದೇ ತಿಂಗಳ 16ರ ನಸುಕಿನ ಜಾವ ನೇತ್ರಾವತಿ ಸೇತುವೆ ಮೇಲೆ ಕಾರು ನಿಲ್ಲಿಸಿ ನಾಪತ್ತೆಯಾಗಿದ್ದ ಅಪ್ಪ ಮಗುವಿನ ಶವ ಉಡುಪಿಯಲ್ಲಿ ಪತ್ತೆಯಾಗಿದೆ.
ಬಂಟ್ವಾಳ ತಾಲ್ಲೂಕಿನ ಬಾಳ್ತಿಲ ನಿವಾಸಿ ಗೋಪಾಲಕೃಷ್ಣ ರೈ (55) ಮತ್ತು ಅವರ ಮಗ ನಮೀಶ್ ರೈ (6) ಫೆಬ್ರವರಿ 16 ರಂದು ಕಲ್ಲಾಪು ಬಳಿಯ ನೇತ್ರಾವತಿ ಸೇತುವೆ ಮೇಲೆ ಕಾರು ನಿಲ್ಲಿಸಿ ಡೆತ್ ನೋಟ್ ಬರೆದಿಟ್ಟು ಮಗನೊಂದಿಗೆ ನಾಪತ್ತೆಯಾಗಿದ್ದರು. ಈಗ ಇವರ ಶವ ಉಡುಪಿ ಜಿಲ್ಲೆ ಕಟಪಾಡಿ ಸಮೀಪದ ಪಡುಕೆರೆ ಸಮುದ್ರ ಕಿನಾರೆಯಲ್ಲಿ ಶುಕ್ರವಾರ ರಾತ್ರಿ ಪತ್ತೆಯಾಗಿದೆ.
ಮುಂಬೈನಲ್ಲಿ ಹೋಟೆಲ್ ಉದ್ಯಮಿಯಾಗಿದ್ದ ಗೋಪಾಲಕೃಷ್ಣ ರೈ ಸಂಬಂಧಿಕರ ಮನೆಯ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಬಂದಿದ್ದು ನಂತರ ಮಗನೊಂದಿಗೆ ನಾಪತ್ತೆಯಾಗಿದ್ದರು. ನೇತ್ರಾವತಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿತ್ತು. 12 ದಿನಗಳಾದರೂ ಸುಳಿವು ಸಿಕ್ಕಿರಲಿಲ್ಲ. ಶುಕ್ರವಾರ ರಾತ್ರಿ ವೇಳೆಗೆ ಅಪ್ಪ ಮತ್ತು ಮಗನ ಮೃತ ದೇಹಗಳು ಪಡುಕೆರೆ ಕಿನಾರೆಯಲ್ಲಿ ತೇಲಿ ಬಂದಿವೆ. ಪೋಷಕರೊಂದಿಗೆ ಸ್ಥಳಕ್ಕೆ ತೆರಳಿದ ಪೊಲೀಸರು ಇಬ್ಬರ ಗುರುತು ಪತ್ತೆ ಮಾಡಿದ್ದಾರೆ.
You must be logged in to post a comment Login