LATEST NEWS
ಉಡುಪಿ ಕಡಲ್ಕೊರೆತ ಪ್ರದೇಶಗಳಿಗೆ ಜಿಲ್ಲಾಧಿಕಾರಿ ಭೇಟಿ
ಉಡುಪಿ ಅಗಸ್ಟ್ 7: ಉಡುಪಿ ಜಿಲ್ಲೆಯಲ್ಲಿ ಕಳೆದ ಮೂರ್ನಾಲ್ಕು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಅರಬ್ಬಿ ಸಮುದ್ರ ಪ್ರಕ್ಷ್ಯುಬ್ದವಾಗಿದೆ. ಸಮುದ್ರದ ಅಲೆಗಳು ದಡಕ್ಕೆ ಅಪ್ಪಳಿಸಿ ಜನವಸತಿ ಪ್ರದೇಶಗಳತ್ತ ನುಗ್ಗುತ್ತಿದೆ. ಹೀಗಾಗಿ ಉಡುಪಿ ಜಿಲ್ಲೆಯಲ್ಲಿ ಕಡಲ್ಕೊರೆತ ಹೆಚ್ಚಾಗುತ್ತಿದೆ.
ನಿನ್ನೆಯಷ್ಟೇ ಉಡುಪಿಯ ಪಡುಕೆರೆ ಕಡಲಿನಲ್ಲಿ ಸಮುದ್ರದ ರಕ್ಕಸ ಅಲೆಗಳು ಆತಂಕವನ್ನ ಸೃಷ್ಟಿಸಿತ್ತು. ಕಡಲಿನ ಬೋರ್ಗರೆತ ಜಾಸ್ತಿಯಾಗಿ ಸಮುದ್ರದ ನೀರು ಏಕಾಏಕಿ ಮೀನುಗಾರಿಕಾ ರಸ್ತೆಗೆ ನುಗ್ಗಿತ್ತು. ಬೃಹತ್ ಗಾತ್ರದ ಅಲೆಗೆ ಕಡಲಿನ ಮರಳು ರಸ್ತೆ ಮೇಲೆ ಬಿದ್ದು ವಾಹನ ಸಂಚಾರ ಅಸ್ತವ್ಯಸ್ಥವಾಗಿತ್ತು.
ಈ ಪರಿಸ್ಥಿತಿ ಅರಿತ ಜಿಲ್ಲಾಧಿಕಾರಿ ಜಿ.ಜಗದೀಶ್, ಕೂಡಲೇ ಅಧಿಕಾರಿಗಳೊಂದಿಗೆ ಸ್ಥಳಕ್ಕೆ ಭೇಟಿ ಕೊಟ್ಟಿದ್ದಾರೆ. ಜಿಲ್ಲಾ ಪಂಚಾಯತ್ ಅಧ್ಯಕ್ಷ ದಿನಕರ ಬಾಬು ಸೇರಿದಂತೆ ಸಂಬಂಧಪಟ್ಟ ಅಧಿಕಾರಿಗಳ ಜೊತೆ ಚರ್ಚಿಸಿದ ಡಿಸಿ ಜಗದೀಶ್ ಮುಂದಿನ ಪರಿಹಾರೋಪಾಯದ ಕುರಿತು ಸೂಚನೆ ನೀಡಿದ್ರು. ಮನೆಗಳು ಹೆಚ್ಚಿರುವ ಪ್ರದೇಶಗಳಲ್ಲಿ ತಡೆಗೋಡೆ ನಿರ್ಮಿಸಬೇಕು. ತಾತ್ಕಾಲಿಕವಾಗಿ ಕಡಲತೀರಕ್ಕೆ ಕಲ್ಲುಗಳನ್ನು ಹಾಕಬೇಕು. ಮುಂದೆ ಇದಕ್ಕೊಂದು ಶಾಶ್ವತ ಪರಿಹಾರ ಬೇಕು ಎಂದು ಸ್ಥಳೀಯರು ಈ ವೇಳೆ ಒತ್ತಾಯಿಸಿದರು.
You must be logged in to post a comment Login