Connect with us

    LATEST NEWS

    ಕೇರಳಕ್ಕೆ ಮುಂಗಾರು, ಮುಂಬೈಗೆ ಅಪ್ಪಳಿಸಲಿದೆ ಸೈಕ್ಲೋನ್ ನಿಸರ್ಗ

    ಕೇರಳಕ್ಕೆ ಮುಂಗಾರು, ಮುಂಬೈಗೆ ಅಪ್ಪಳಿಸಲಿದೆ ಸೈಕ್ಲೋನ್ ನಿಸರ್ಗ

    ಮಂಗಳೂರು, ಜೂನ್ 1: ಕೇರಳಕ್ಕೆ ನಿರೀಕ್ಷೆಯಂತೆ ಇಂದು ಮಧ್ಯಾಹ್ನ ಹೊತ್ತಿಗೆ ನೈರುತ್ಯ ಮುಂಗಾರು ಪ್ರವೇಶ ಮಾಡಿದೆ. ಕೇರಳಕ್ಕೆ ಮುಂಗಾರು ಪ್ರವೇಶ ಮಾಡಿದ್ದನ್ನು ಭಾರತೀಯ ಹವಾಮಾನ ಇಲಾಖೆ ದೃಢಪಡಿಸಿದೆ. 2013ರ ಬಳಿಕ ಇದೇ ಮೊದಲ ಬಾರಿಗೆ ಜೂನ್ ಒಂದರಂದು ವಾಡಿಕೆ ರೀತಿಯಲ್ಲಿ ಮುಂಗಾರು ಆರಂಭಗೊಂಡಿದ್ದು, ಈ ಬಾರಿ ನಾಲ್ಕು ತಿಂಗಳ ಕಾಲ ಮಳೆ ಬೀಳಲಿದೆ ಎಂದು ಅಂದಾಜು ಮಾಡಿದೆ.

    ಇದೇ ವೇಳೆ, ಅರಬ್ಬೀ ಸಮುದ್ರದಲ್ಲಿ ವಾಯುಭಾರ ಕುಸಿತವಾದ ಪರಿಣಾಮ ನಿಸರ್ಗ ಎನ್ನುವ ಚಂಡಮಾರುತ ಕಾಣಿಸಿಕೊಂಡಿದ್ದು, ಜೂನ್ 3ರ ವೇಳೆಗೆ ಮಹಾರಾಷ್ಟ್ರ ಮತ್ತು ಗುಜರಾತ್ ಕರಾವಳಿಗೆ ಅಪ್ಪಳಿಸುವ ಸಾಧ್ಯತೆಯಿದೆ. ಚಂಡಮಾರುತ ಪರಿಣಾಮ ಕರ್ನಾಟಕದ ಕರಾವಳಿ ಪ್ರದೇಶದಲ್ಲಿಯೂ ಮಳೆಯಾಗುವ ಮುನ್ಸೂಚನೆ ನೀಡಲಾಗಿದೆ.

    ಈಗಾಗ್ಲೇ ಕೊರೊನಾದಿಂದ ತತ್ತರಿಸಿರುವ ಮುಂಬೈ ಮಹಾನಗರಕ್ಕೆ ನಿಸರ್ಗ ಚಂಡಮಾರುತ ಮತ್ತೊಂದು ರೀತಿಯ ಸವಾಲಾಗಲಿದೆ. ಇತ್ತೀಚೆಗಷ್ಟೇ ಬಂಗಾಳ ಕೊಲ್ಲಿಯಲ್ಲಿ ಉದ್ಭವಿಸಿದ್ದ ಅಂಫಾನ್ ಚಂಡಮಾರುತ ಪಶ್ಚಿಮ ಬಂಗಾಳದಲ್ಲಿ ನೂರು ಮಂದಿಯನ್ನು ಬಲಿ ತೆಗೆದುಕೊಂಡಿತ್ತು.

    ನಿಸರ್ಗ ಚಂಡಮಾರುತ ಹಿನ್ನೆಲೆಯಲ್ಲಿ ಮಹಾರಾಷ್ಟ್ರ ಮತ್ತು ಗುಜರಾತ್ ರಾಜ್ಯಗಳು ಕೆಲವು ರಾಜ್ಯಗಳಲ್ಲಿ ರೆಡ್ ಅಲರ್ಟ್ ಘೋಷಣೆ ಮಾಡಿದೆ. ಗುಜರಾತ್ ಮತ್ತು ಮಹಾರಾಷ್ಟ್ರ ರಾಜ್ಯಗಳಿಗೆ ನಿಸರ್ಗ ಚಂಡಮಾರುತ ಹೆಚ್ಚು ಹಾನಿ ಮಾಡಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ.

    ಸೈಕ್ಲೋನ್ ಹಿನ್ನೆಲೆಯಲ್ಲಿ ಸಮುದ್ರದಲ್ಲಿ 100ರಿಂದ 110 ಕಿಮೀ ವೇಗದಲ್ಲಿ ಬಿರುಗಾಳಿ ಕಾಣಿಸಿಕೊಳ್ಳಲಿದ್ದು, ಮೀನುಗಾರರು ಜೂನ್ 4ರ ವರೆಗೆ ಸಮುದ್ರಕ್ಕೆ ಇಳಿಯದಂತೆ ಹವಾಮಾನ ಇಲಾಖೆ ಸೂಚನೆ ನೀಡಿದೆ.

    Share Information
    Advertisement
    Click to comment

    You must be logged in to post a comment Login

    Leave a Reply