Connect with us

    DAKSHINA KANNADA

    ಹಲವು ಪ್ರಕರಣಗಳ ಆರೋಪಿ ದುಬೈನಲ್ಲಿ ಹೃದಯಾಘಾತಕ್ಕೆ ಸಾವು

    ಮಂಗಳೂರು,ಅಕ್ಟೋಬರ್ 23: ಕೊಲೆ, ಕೊಲೆಯತ್ನ , ದರೋಡೆ ಸೇರಿದಂತೆ ಉಳ್ಳಾಲ ಸಹಿತ ಮಂಗಳೂರಿನ ವಿವಿಧ ಠಾಣೆಗಳಲ್ಲಿ 19 ಪ್ರಕರಣಗಳ ಆರೋಪಿಯಾಗಿದ್ದ ಟಾರ್ಗೆಟ್ ತಂಡದ ಸದಸ್ಯ ಅಲ್ತಾಫ್ ಉಳ್ಳಾಲ್ ವಿದೇಶದಲ್ಲಿ ಹೃದಯಾಘಾತದಲ್ಲಿ ಸಾವನ್ನಪ್ಪಿದ್ದಾನೆ.
    ಕಾಂಚನ ಮೆನೇಜರ್ ಕೊಲೆ ಪ್ರಕರಣ, ಕೊಲೆಯತ್ನ , ದರೋಡೆ ಸಹಿತ ಉಳ್ಳಾಲದಲ್ಲಿ ನಡೆದ ಜುಬೈರ್ ಹತ್ಯೆ ಪ್ರಕರಣದಲ್ಲಿ ಪ್ರಮುಖನೆಂದು ಗುರುತಿಸಲ್ಪಟ್ಟ ಅಲ್ತಾಫ್ , 2017ರಲ್ಲಿ ನಕಲಿ ಪಾಸ್‍ಪೋಟ್ ಬಳಸಿ ವಿದೇಶಕ್ಕೆ ಪಲಾಯನ ನಡೆಸಿದ್ದ ಅಲ್ತಾಫ್ ಮಂಗಳೂರು ಪೊಲೀಸರಿಂದ ತಪ್ಪಿಸಿ ಅಲ್ಲೇ ಉಳಿದಿದ್ದನು.

    ಗಲಭೆ ಪ್ರಕರಣಕ್ಕೆ ಸಂಬಂಧಿಸಿ ಮುಕ್ಕಚ್ಚೇರಿ ನಿವಾಸಿ ಬಿಜೆಪಿ ಮುಖಂಡ ಜುಬೈರ್ ಎಂಬವರು 2016ರಲ್ಲಿ ಅಲ್ತಾಫ್ ವಿರುದ್ಧ ದೂರು ನೀಡಿದ್ದರು. ಆ ಬಳಿಕ ಅಲ್ತಾಫ್ ಮೇಲೆ ಗೂಂಡಾ ಕಾಯ್ದೆಯನ್ನು ಪೊಲೀಸ್ ಇಲಾಖೆ ಹಾಕಿತ್ತು. ಇದೇ ದ್ವೇಷವನ್ನು ಜೈಲಿನಿಂದ ಜಾಮೀನಿನ ಮೇಲೆ ಬಿಡುಗಡೆಗೊಂಡ ಅಲ್ತಾಫ್ , ದೂರು ನೀಡಿದ ಜುಬೈರ್ ನನ್ನು ಕೊಲೆ ನಡೆಸುವ ಮುಖೇನ ತೀರಿಸಿದ್ದನು ಎಂದು ಆಗಿನ ನಗರ ಪೊಲೀಸ್ ಆಯುಕ್ತ ಟಿ.ಆರ್ ಸುರೇಶ್ ತಿಳಿಸಿದ್ದರು.

    Share Information
    Advertisement
    Click to comment

    You must be logged in to post a comment Login

    Leave a Reply