Connect with us

    LATEST NEWS

    ಸಚಿವ ಸುನಿಲ್ ಕುಮಾರ್ ತವರಿನಲ್ಲಿ ಗೋಕಳ್ಳರ ಅಟ್ಟಹಾಸ….!!

    ಕಾರ್ಕಳ ಜನವರಿ 8: ರಾಜ್ಯದಲ್ಲಿ ಗೋ ಹತ್ಯೆ ನಿಷೇಧ ಕಾಯ್ದೆ ಜಾರಿಗೆ ತಂದು ಬೀಗುತ್ತಿದ್ದ ಬಿಜೆಪಿಯ ಭದ್ರ ಕೋಟೆ ಕಾರ್ಕಳದಲ್ಲಿ ಗೋಕಳ್ಳರ ಅಟ್ಟಹಾಸ ಮುಂದುವರೆದಿದ್ದು, ಕರಿಯಕಲ್ಲು ಕಜೆ ಎಂಬಲ್ಲಿನ ಎರಡು ಮನೆಗಳಿಂದ ರಾತ್ರಿ ಎರಡು ದನಗಳನ್ನು ಕಳ್ಳರು ಕದ್ದುಕೊಂಡು ಹೋಗಿರುವ ಘಟನೆ ನಡೆದಿದೆ.


    ಯಶೋಧ ಆಚಾರ್ಯ ಮತ್ತು ಸುಧಾಕರ ಶೆಟ್ಟಿ ಎಂಬವರ ಮನೆಯಿಂದ ಎರಡು ದನಗಳನ್ನು ಗೋಕಳ್ಳರು ಕದ್ದೊಯ್ದಿದ್ದಾರೆ. ಈ ಪ್ರದೇಶದಲ್ಲಿ ಅವ್ಯಾಹತವಾಗಿ ಗೋಕಳ್ಳತನ ನಡೆಯುತ್ತಿದ್ದು. ಒಂದು ವರ್ಷದ ಅವಧಿಯಲ್ಲಿ ಒಂದು ಮನೆಯಿಂದ 16 ದನಗಳ ಕಳವು, ಮತ್ತೊಂದು ಮನೆಯಿಂದ 12 ಗೋವುಗಳನ್ನು ಕಳ್ಳರು ಕದ್ದೊಯ್ದಿದ್ದಾರೆ.


    ಸ್ಥಳಕ್ಕೆ ಹಿಂದೂಜಾಗರಣ ವೇದಿಕೆಯ ಮುಖಂಡರು ಭೇಟಿ ನೀಡಿದ್ದು, ಪ್ರಕರಣದ ಬಗ್ಗೆ ಸೂಕ್ತ ಕ್ರಮಕೈಗೊಳ್ಳುವಂತೆ ಪೊಲೀಸರಿಗೆ ಒತ್ತಾಯಿಸಿದ್ದಾರೆ.

    Share Information
    Advertisement
    Click to comment

    You must be logged in to post a comment Login

    Leave a Reply