LATEST NEWS
ನೀರು ತುಂಬಿದ್ದ ಗುಂಡಿಗೆ ಬಿದ್ದಿದ್ದ ಕರು ರಕ್ಷಣೆ
ಮಂಗಳೂರು : ಮಂಗಳೂರಿನ ತಣ್ಣೀರುಬಾವಿ ಬೀಚ್ ಗೆ ಹೋಗುವ ರಸ್ತೆ ಬದಿಯಲ್ಲಿ ಗುತ್ತಿಗೆ ಕಾರ್ಮಿಕರು ತೋಡಿದ ಗುಂಡಿಗೆ ಬಿದ್ದಿದ್ದ ಕರುವನ್ನು ರಕ್ಷಿಸಲಾಗಿದೆ.
ತಣ್ಣೀರು ಬಾವಿ ಬೀಚ್ ಗೆ ತೆರಳು ರಸ್ತೆ ಬದಿ ಗುಂಡಿಯೊಂದಕ್ಕೆ ಸಣ್ಣ ಕರುವೊಂದು ಬಿದ್ದು ಮೇಲೆ ಬರಲಾರದೇ ಒದ್ದಾಟ ನಡೆಸುತ್ತಿತ್ತು. ಈ ಸಂದರ್ಭ ಅದೇ ರಸ್ತೆಯಲ್ಲಿ ಪ್ರಯಾಣಿಸುತಿದ್ದ ನಿಖಿಲ್ ಪೂಜಾರಿಯವರು ಕೂಡಲೇ ನೀರು ತುಂಬಿದ ಹೊಂಡಕ್ಕೆ ಇಳಿದು ಬಹಳ ಶ್ರಮಪಟ್ಟು ಕರುವನ್ನು ಮೇಲೆತ್ತಿ ರಕ್ಷಣೆ ಮಾಡಿದ್ದಾರೆ. ಪ್ರಾಣಪಾಯದಲ್ಲಿದ್ದ ಕರುವನ್ನು ರಕ್ಷಿಸಿ ಮರು ಜೀವ ಕೊಟ್ಟ ನಿಖಿಲ್ ಪೂಜಾರಿ ಅವರಿಗೆ ಸ್ಥಳೀಯರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
You must be logged in to post a comment Login