Connect with us

    LATEST NEWS

    ಕೊರೊನಾದಿಂದ ಮೃತಪಟ್ಟವರ ಅಂತ್ಯಸಂಸ್ಕಾರ ನಿಯಮಗಳಲ್ಲಿ ಕೊಂಚ ಸಡಿಲಿಕೆ ಮಾಡಿದ ಜಿಲ್ಲಾಡಳಿತ

    ಮಂಗಳೂರು ಅಗಸ್ಟ್ 2:ಕೊರೊನಾದಿಂದ ಮೃತಪಟ್ಟವರ ಅಂತ್ಯ ಸಂಸ್ಕಾರ ಸಂದರ್ಭದಲ್ಲಿ ಉಂಟಾದ ಗೊಂದಲಗಳು ಹಾಗೂ ದಿನದಿಂದ ದಿನಕ್ಕೆ ಮೃತರ ಸಂಖ್ಯೆ ಏರಿಕೆ ಹಿನ್ನಲೆ ಉಡುಪಿ ಹಾಗೂ ದಕ್ಷಿಣಕನ್ನಡ ಜಿಲ್ಲಾಡಳಿತ ಕೊರೊನಾದಿಂದ ಮೃತಪಟ್ಟವರ ಅಂತ್ಯ ಸಂಸ್ಕಾರದಲ್ಲಿ ತುಸು ಸಡಲಿಕೆ ಮಾಡಿದೆ.


    ಅಂದರಂತೆ ಇದೀಗ ಮೃತದೇಹಗಳನ್ನು ಕುಟುಂಬದವರು ಅವರ ಜಾಗದಲ್ಲಿ ಅಂತ್ಯಸಂಸ್ಕಾರ ಮಾಡುವುದಕ್ಕೆ ಅವಕಾಶ ಮಾಡಿಕೊಡುತ್ತಿದೆ. ಆದರೆ ಶವವನ್ನು ಕುಟುಂಬಸ್ಥರು ಮುಟ್ಟುವುದಕ್ಕೆ ಅವಕಾಶವಿಲ್ಲ, ಬದಲಿಗೆ ಅವರ ಜಾಗದಲ್ಲಿ ಮಾತ್ರವೇ ಸುಡುವುದು, ದಫನ ಮಾಡುವುದಕ್ಕೆ ಅನುವು ಮಾಡಿಕೊಡಲಾಗುವುದು.

    ಆಂಬ್ಯುಲೆನ್ಸ್ ವ್ಯವಸ್ಥೆಯನ್ನು ಮೃತರ ಕುಟುಂಬಸ್ಥರು ಮಾಡಬೇಕಾಗುತ್ತದೆ. ಕೆಲವು ಕುಟುಂಬದವರಿಗೆ ತಮ್ಮ ಜಾಗದಲ್ಲೇ ಮೃತದೇಹದ ಅಂತಿಮ ಸಂಸ್ಕಾರ ಆಗಲಿ ಎಂಬ ಭಾವನಾತ್ಮಕ ಬೇಡಿಕೆ ಇರುತ್ತದೆ, ಅಂತಹವರಿಗೆ ಸೂಕ್ತ ಜಾಗವಿದ್ದರೆ ನಾವು ಅವಕಾಶ ಮಾಡಿಕೊಡುತ್ತೇವೆ. ಆದರೆ ಹೊರ ಜಿಲ್ಲೆಯವರಿಗೆ ಮೃತದೇಹ ಹೊರಗೆ ಕೊಂಡೊಯ್ಯಲು ಅವಕಾಶವಿಲ್ಲ ಎಂದು ಮಂಗಳೂರು ಎಸಿ ಮದನ್ ಮೋಹನ್ ತಿಳಿಸಿದ್ದಾರೆ.

    ADVERTISEMENT

    ಇನ್ನು ಉಡುಪಿ ಜಿಲ್ಲೆಯಲ್ಲೂ ಇದೇ ರೀತಿ ಅವಕಾಶವಿದೆ. ಕುಟುಂಬಸ್ಥರು ಬಯಸಿದರೆ, ಸ್ವಂತ ಜಾಗವಿದ್ದರೆ ಮೃತದೇಹವನ್ನು ಅವರದೇ ಜಾಗದಲ್ಲಿ ದಫನ, ದಹನಕ್ಕೆ ಅವಕಾಶವಿದೆ. ಸ್ಥಳೀಯರಿಂದ ವಿರೋಧ ಇರಬಾರದು. ಕೋವಿಡ್ ಶಿಷ್ಟಾಚಾರದ ಪ್ರಕಾರವೇ ಅಂತ್ಯಸಂಸ್ಕಾರ ನಡೆಸಲಾಗುತ್ತದೆ ಎಂದು ಉಡುಪಿ ಜಿಲ್ಲಾ ಆರೋಗ್ಯಾಧಿಕಾರಿ ಸುಧೀರ್‌ಚಂದ್ರ ಸೂಡ ತಿಳಿಸಿದ್ದಾರೆ.

    Share Information
    Advertisement
    Click to comment

    You must be logged in to post a comment Login

    Leave a Reply