Connect with us

    DAKSHINA KANNADA

    ಹಿಂದೂ ಮಹಾಸಭಾ ರಾಜ್ಯಾಧ್ಯಕ್ಷ ರಾಜೇಶ್‌ ಪವಿತ್ರನ್‌ ಹತ್ಯೆಗೆ ಸಂಚು?

    ಮಂಗಳೂರು, ಆಗಸ್ಟ್ 22: ನನ್ನ ಕೊಲೆಗೆ ಸಂಚು ರೂಪಿಸಲಾಗಿದೆ, ಸಿಸಿಬಿ ಪೊಲೀಸ್‌ ಎಂದು ಹೇಳಿ ಕೆಲ ಹಿಂದೂಗಳೇ ಬಂದು ನನ್ನ ಬಗ್ಗೆ ಮಾಹಿತಿ ಕಲೆ ಹಾಕಿದ್ದಾರೆ ಎಂದು ಸ್ವತಃ ಹಿಂದೂ ಮಹಾಸಭಾ ರಾಜ್ಯಾಧ್ಯಕ್ಷ ರಾಜೇಶ್‌ ಪವಿತ್ರನ್‌ ಆರೋಪಿಸಿದ್ದಾರೆ.

    ಈ ಬಗ್ಗೆ ನಗರದ ಖಾಸಗಿ ಹೊಟೇಲ್‌ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ರಾಜೇಶ್‌ ಪವಿತ್ರನ್‌ ಅವರ ಮಾಜಿ ಕಾರು ಚಾಲಕ ಸುರತ್ಕಲ್‌ನ ಮುಕ್ಕ ನಿವಾಸಿ ಕಿರಣ್‌ ಮನೆಗೆ ಆ.17 ರಂದು ರಾತ್ರಿ 9 ಗಂಟೆಗೆ 5 ಜನ ಅಪರಿಚಿತರು ಬಂದು ರಾಜೇಶ್‌ ಪವಿತ್ರನ್‌ ಅವರ ಚಲನ, ವಲನ, ವಹಿವಾಟು ಬಗ್ಗೆ ವಿಚಾರಿಸಿದ್ದಾರೆ.

    ಆಗ ನೀವು ಯಾರೆಂದು ಕೇಳಿದಾಗ ನಾವು ಸಿಸಿಬಿ ಪೊಲೀಸರು ಎಂದು ಹೇಳಿ ಬಂದೂಕು ತೋರಿಸಿ ಯಾರ ಬಳಿಯೂ ಹೇಳದಂತೆ ತಾಕೀತು ಮಾಡಿದ್ದಾರೆ. ಈ ಬಗ್ಗೆ ತಕ್ಷಣ ಸುರತ್ಕಲ್‌ ಪೊಲೀಸ್‌ ಠಾಣೆ ಹಾಗೂ ಮಂಗಳೂರು ನಗರ ಪೊಲೀಸ್‌ ಆಯುಕ್ತರಿಗೆ ದೂರು ನೀಡಿದ್ದಾರೆ.

    ಆ ರಾತ್ರಿ ಕಿರಣ್‌ ಮನೆಗೆ ಬಂದವರು ಹಿಂದೂಗಳೇ ಎಂದು ನನಗೆ ಖಚಿತ ಮಾಹಿತಿ ಬಂದಿದೆ. ಇದು ನಮಗೆ ನಿಜವಾಗಿ ನೋವಾಗಿದೆ. ಬಿಜೆಪಿ ಸರಕಾರದಡಿ ಹಿಂದೂ ನಾಯಕರಿಗೆ ಪ್ರಾಮುಖ್ಯತೆ ಇಲ್ಲ. ಮುತಾಲಿಕ್‌ ಸೇರಿ ಹಲವರಿಗೆ ನೀಡಿದ ಭದ್ರತೆ ಬಿಜೆಪಿ ಹಿಂತೆಗೆದುಕೊಂಡಿದೆ ಎಂದು ಆರೋಪಿಸಿದ ಅವರು. ಈ ಬಗ್ಗೆ ಸೂಕ್ತ ತನಿಖೆ ನಡೆಸಿ ಎಂದು ಪೊಲೀಸರಿಗೆ ಮುಕ್ತ ಸ್ವಾತಂತ್ರ್ಯ ಕೊಡಿ ಎಂದು ಹೇಳಿದ ಅವರು ಎಲ್ಲವೂ ಆದ ಮೇಲೆ ಶಾಂತಿ ಮಾತುಕತೆ ಬೇಡ ಎಂದು ಹೇಳಿದರು.

    Share Information
    Advertisement
    Click to comment

    You must be logged in to post a comment Login

    Leave a Reply