Connect with us

    LATEST NEWS

    ಎಸ್ ಡಿಪಿಐ ಮತ್ತಿತರ ಮತಾಂಧ ಶಕ್ತಿಗಳೊಂದಿಗೆ ಕೈಜೋಡಿಸಿದ ಕಾಂಗ್ರೇಸ್ – ಗೋಪಾಲ್ ಜೀ

    ಎಸ್ ಡಿಪಿಐ ಮತ್ತಿತರ ಮತಾಂಧ ಶಕ್ತಿಗಳೊಂದಿಗೆ ಕೈಜೋಡಿಸಿದ ಕಾಂಗ್ರೇಸ್ – ಗೋಪಾಲ್ ಜೀ

    ಮಂಗಳೂರು ಮೇ 03: ಗೋಹತ್ಯೆಗೆ ಪ್ರೋತ್ಸಾಹ ನೀಡಿದ ಕಾಂಗ್ರೇಸ್ ಸರಕಾರ ಈಗ ಚುನಾವಣೆ ಸಂದರ್ಭ ಎಸ್‌ ಡಿಪಿಐ ಮತ್ತಿತರ ಮತಾಂಧ ಶಕ್ತಿಗಳೊಂದಿಗೆ ಕೈಜೋಡಿಸಿದೆ ಎಂದು ವಿಶ್ವಹಿಂದೂ ಪರಿಷತ್ ಕ್ಷೇತ್ರೀಯ ಸಂಘಟನಾ ಕಾರ್ಯದರ್ಶಿ ಗೋಪಾಲ್ ವಾಗ್ದಾಳಿ ನಡೆಸಿದ್ದಾರೆ.

    ಮಂಗಳೂರಿನಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರಕಾರದ 5 ವರ್ಷ ಹಿಂದೂ ವಿರೋಧಿಯಾಗಿ ಕಾರ್ಯ ನಿರ್ವಹಿಸಿದೆ. ರಾಜ್ಯದಲ್ಲಿ ಹಿಂದೂಗಳು ಆಚರಿಸುವ ಹಬ್ಬಗಳನ್ನು ತಡೆಯುವ ಹಾಗು ಹತ್ತಿಕ್ಕುವ ಕೆಲಸ ಕಾಂಗ್ರೆಸ್ ಮಾಡಿದ್ದು ಮತಾಂಧ ಶಕ್ತಿಗಳೊಂದಿಗೆ ಕೈ ಜೋಡಿಸಿ ಹಿಂಸೆಗೆ ಪ್ರಚೋಧನೆ ನೀಡಿದೆ ಎಂದು ಅವರು ಕಿಡಿಕಾರಿದರು. ಹಿಂದೂ ಮತಗಳಿಗಾಗಿ ಈಗ ನಾಟಕ ವಾಡುತ್ತಿರುವ ಕಾಂಗ್ರೆಸ್ ಜನರು ತಿರಸ್ಕರಿಸಿ ಹಿಂದೂ ಗಳ ಪರವಾಗಿರುವ ಪಕ್ಷಕ್ಕೆ ಮತಹಾಕುವಂತೆ ಅವರು ಆಗ್ರಹಿಸಿದರು.

    ರಾಜ್ಯದಲ್ಲಿ ಹಿಂದೂ ಕಾರ್ಯಕರ್ತರನ್ನು ಹತ್ಯೆ ಮಾಡಿದೆ. ಮಂಗಳೂರು ಜೈಲಿನಲ್ಲಿ ಹಿರಿಯ ಪೊಲೀಸ್ ಅದಿಕಾರಿಗಳ ಮೇಲೆ ಹಲ್ಲೆ ನಡೆಸಿದ್ದ ಎಸ್ ಡಿ ಪಿ ಐ ಹಾಗು ಪಿ ಎಫ್ ಐ ಸಂಘಟನೆ ಯೊಂದಿಗೆ ಕಾಂಗ್ರೆಸ್ ಕೈ ಜೋಡಿಸಿರುವುದು ಖಂಡನೀಯ ಎಂದು ಹೇಳಿದರು. ಮನೆಗಳ ಹಟ್ಟಿಗಳಿಂದ ಹಾಗು ಗೋ ಶಾಲೆ ಗಳಿಂದ ಮಾರಕಾಸ್ತ್ರ ಗಳಿಂದ ಬೆದರಿಸಿ ಗೋವುಗಳನ್ನು ಅಪಹರಿಸುವ ದುಷ್ಕರ್ಮಿಗಳಿಗೆ ರಾಜ್ಯ ಸರಕಾರ ರಕ್ಷಣೆ ನೀಡಿದೆ ಎಂದು ಅವರು ಆರೋಪಿಸಿದರು.

    Share Information
    Advertisement
    Click to comment

    You must be logged in to post a comment Login

    Leave a Reply