LATEST NEWS
ಕೇಂದ್ರದಿಂದ ಮುಖ್ಯಮಂತ್ರಿಗೆ ಅವಮಾನ ಸಹಿಸಲ್ಲ ಯಡಿಯೂರಪ್ಪ ಪರ ನಿಂತ ಕಾಂಗ್ರೇಸ್
ಕೇಂದ್ರದಿಂದ ಮುಖ್ಯಮಂತ್ರಿಗೆ ಅವಮಾನ ಸಹಿಸಲ್ಲ ಯಡಿಯೂರಪ್ಪ ಪರ ನಿಂತ ಕಾಂಗ್ರೇಸ್
ಮಂಗಳೂರು ಸೆಪ್ಟೆಂಬರ್ 28: ಕರ್ನಾಟಕದ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರನ್ನು ಕೇಂದ್ರ ಸರಕಾರ ನಡೆಸಿಕೊಳ್ಳುತ್ತಿರುವ ರೀತಿಗೆ ಕಾಂಗ್ರೇಸ್ ಗರಂ ಆಗಿದೆ. ಒಂದು ರಾಜ್ಯದ ಚುನಾಯಿತ ಮುಖ್ಯಮಂತ್ರಿಯೊಬ್ಬರನ್ನು ಕೇಂದ್ರ ಸರ್ಕಾರವು ಗೌರವದಿಂದ ಕಾಣಬೇಕು.
ದೆಹಲಿಗೆ ಬಿ.ಎಸ್ ಯಡಿಯೂರಪ್ಪ ಹೋದರೆ ಅವರಿಗೆ ಕೇಂದ್ರದ ಜೊತೆ ಮಾತನಾಡಲು ಅವಕಾಶ ಕೊಡದೇ ಅವಮಾನ ಮಾಡುವುದು ನಮಗೆ ಇಷ್ಟ ಇಲ್ಲ. ನಾವೆಲ್ಲರೂ ಮುಖ್ಯಮಂತ್ರಿಗಳ ಜೊತೆ ಇದ್ದೇವೆ ಎಂದು ಮಾಜಿ ಸಚಿವ ಯುಟಿ ಖಾದರ್ ಹೇಳಿದರು.
ಮಂಗಳೂರಿನ ಸರ್ಕ್ಯೂಟ್ ಹೌಸ್ ನಲ್ಲಿ ಮಾತನಾಡಿದ ಅವರು ಉದ್ದೇಶಿಸಿ ಮಾತನಾಡಿದ ಅವರು ನಮ್ಮ ರಾಜ್ಯದ ಸಿಎಂಗೆ ಅವಮಾನ ಆದರೆ ಅದು ನಮ್ಮೆಲ್ಲರಿಗೂ ಅವಮಾನ ಆದಂತೆ. ಕೇಂದ್ರವು ರಾಜ್ಯದ ನೆರೆ ಸಂತ್ರಸ್ತರಿಗೆ ಪರಿಹಾರ ನೀಡುವಲ್ಲಿ ವಿಳಂಬ ಮಾಡುತ್ತಿರುವುದು ಸರಿಯಲ್ಲ, ರಾಜ್ಯಕ್ಕೆ ಸಿಗುವ ಪಾಲನ್ನು ಕೇಂದ್ರವು ನ್ಯಾಯಯುತವಾಗಿ ನೀಡಬೇಕೆಂದು ಹೇಳಿದರು.
ಗಾಂಧಿ ಜಯಂತಿ ಕಾರ್ಯಕ್ರಮಕ್ಕೆ ತಯಾರು ಮಾಡಿದ್ದೇವೆ ಅಷ್ಟೇ. ಒಂದು ಕಡೆ ಫಿಟ್ ಇಂಡಿಯಾ ಎಂದು ಹೇಳ್ತಾರೆ. ಮತ್ತೊಂದು ಕಡೆ ಟ್ರೋಲ್ ಮಾಡ್ತಾರೆ. ಫಿಟ್ ಆಗುವುದಕ್ಕೆ ನಾವು ಪಥಸಂಚಲನ ಮಾಡುವುದರಲ್ಲಿ ತಪ್ಪು ಏನಿದೆ ಎಂದು ಅವರು ಬಿಜೆಪಿ ನಾಯಕರನ್ನು ಪ್ರಶ್ನಿಸಿದರು.
You must be logged in to post a comment Login