Connect with us

    DAKSHINA KANNADA

    ದೇಶದಲ್ಲಿ,ರಾಜ್ಯದಲ್ಲಿ ಹಿಂದೂಪರ ಕಾನೂನು ತಂದಾಗ ಕಾಂಗ್ರೇಸ್ ಪ್ರತೀ ಬಾರಿಯೂ ವಿರೋಧ ಮಾಡಿದೆ – ನಳಿನ್ ಕುಮಾರ್

    ಪುತ್ತೂರು ಜನವರಿ 04: ಕಾಂಗ್ರೆಸ್ ಪಕ್ಷ ನಿರಂತರ ಹಿಂದೂ ವಿರೋಧಿ ನೀತಿ ಅನುಸರಿಸುತ್ತಿದ್ದು, ಹಿಂದೂಪರ ಕಾನೂನು ಜಾರಿಗೆ ತಂದಾಗಲೆಲ್ಲಾ ಕಾಂಗ್ರೆಸ್ ವಿರೋಧ ವ್ಯಕ್ತಪಡಿಸಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಆರೋಪಿಸಿದ್ದಾರೆ.


    ಪುತ್ತೂರಿನಲ್ಲಿ ಸುದ್ಧಿಗಾರರ ಜೊತೆ ಮಾತನಾಡಿದ ಅವರು ರಾಜ್ಯದಲ್ಲಿ ಮತಾಂತರ ಕಾಯ್ದೆ ಜಾರಿಗೆ ತಂದಾಗಲೂ ಕಾಂಗ್ರೆಸ್ ವಿರೋಧಿಸಿತ್ತು. ಇದೀಗ ದೇವಸ್ಥಾನಗಳಿಗೆ ಸ್ವಾಯುತ್ತತೆ ನೀಡುವ ವಿಚಾರದಲ್ಲೂ ವಿರೋಧಿಸುತ್ತಿದೆ. ಕಾಂಗ್ರೆಸ್ ಒಂದು ವಿಚಾರ ಜನತೆಯ ಮುಂದೆ ಸ್ಪಷ್ಟಪಡಿಸಬೇಕು. ನಿಮಗೆ ಹಿಂದೂಗಳ ಮತ ಬೇಕೇ ,ಬೇಡವೇ ಅನ್ನೋದನ್ನು ತಿಳಿಸಿ.

    ಸಿದ್ಧರಾಮಯ್ಯ ಮುಖ್ಯಮಂತ್ರಿಯಾಗಿದ್ದ ಸಮಯದಲ್ಲಿ ಟಿಪ್ಪು ಜಯಂತಿಯನ್ನು ಯಾರ ಸಂತೃಪ್ತಿಗಾಗಿ ತಂದಿರಿ, ಶಾದಿ ಭಾಗ್ಯ ಯಾರನ್ನು ಓಲೈಸಲು ತಂದಿರು ಅನ್ನೋದನ್ನು ಸ್ಪಷ್ಟಪಡಿಸಬೇಕು. ಕೇವಲ ಒಂದು ಮತಧರ್ಮಕ್ಕಾಗಿ ಯೋಜನೆಗಳನ್ನು ತಂದವರು ದೇವಸ್ಥಾನಗಳ ಸ್ವಾಯುತ್ತತೆ ಕಾನೂನಿಗೆ ಬಗ್ಗೆಯೂ ವಿರೋಧ ವ್ಯಕ್ತಪಡಿಸುವ ಮೂಲಕ ನಿಜ ಬಣ್ಣ ಬಯಲು ಮಾಡಿದ್ದಾರೆ ಎಂದು ಅವರು ಆರೋಪಿಸಿದರು.

    ರಾಮನಗರದಲ್ಲಾದ ಘಟನೆಯನ್ನು ಖಂಡಿಸಿದ ನಳಿನ್ ಕುಮಾರ್ ಕಾಂಗ್ರೆಸ್ ರಾಜ್ಯದಲ್ಲಿ ಗೂಂಢ ಪ್ರವೃತ್ತಿಯನ್ನು ಬೆಳೆಸುತ್ತಿದೆ ಎಂದು ಅವರು ಆರೋಪಿಸಿದರು.ಕಾಂಗ್ರೆಸ್ ಪ್ರಜಾಪ್ರಭುತ್ವದ ಕಗ್ಗೊಲೆ ನಡೆಸುತ್ತಿದೆ ಎಂದ ಅವರು ಕಾಂಗ್ರೇಸ್ ಗೆ ಸಂವಿಧಾನ, ಪ್ರಜಾಪ್ರಭುತ್ವದ ಮೇಲೆ ವಿಶ್ವಾಸವಿಲ್ಲ ಎಂದರು.

    Share Information
    Advertisement
    Click to comment

    You must be logged in to post a comment Login

    Leave a Reply