Connect with us

    LATEST NEWS

    ಅನಂತಕುಮಾರ್ ನಿಧನಕ್ಕೆ ಕೋಟಾ ಸಂತಾಪ

    ಅನಂತಕುಮಾರ್ ನಿಧನಕ್ಕೆ ಕೋಟಾ ಸಂತಾಪ

    ಮಂಗಳೂರು , ನವೆಂಬರ್ 12 : ಕೇಂದ್ರ ರಸಗೊಬ್ಬರ ಸಚಿವ ಅನಂತ ಕುಮಾರ್ ನಿಧನಕ್ಕೆ ವಿಧಾನ ಪರಿಷತ್ ಸದಸ್ಯ ಹಾಗೂ ವಿಧಾನಪರಿಷತ್ ವಿಪಕ್ಷ ನಾಯಕ ಕೋಟಾ ಶ್ರೀನಿವಾಸ ಪೂಜಾರಿ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಮಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ರಾಜ್ಯಕ್ಕೆ ಕೇಂದ್ರದ ಅನುದಾನ ತರಲು ಅನಂತ್ ಕುಮಾರ್ ಪಾತ್ರ ಅಪಾರವಾಗಿದೆ.

    ಅನಂತ ಕುಮಾರ್ ಅಗಲಿಕೆ ರಾಷ್ಟ್ರ ಮತ್ತು ರಾಜ್ಯ ಕ್ಕೆ ನಷ್ಟ ಎಂದ ಕೋಟಾ ರಾಸಾಯನಿಕ ಮತ್ತು ರಸಗೊಬ್ಬರ ಸಚಿವರಾದ ಮೇಲೆ ಅನೇಕ ಸುಧಾರಣೆಗಳನ್ನು ಜಾರಿಗೆ ತಂದರು.

    ರಾಷ್ಟ್ರದಲ್ಲಿ ಒಂದು ದಿನವೂ ರಸಗೊಬ್ಬರ ದ ಕೊರತೆ ಕಂಡಿಲ್ಲ.ಅಟಲ್ ಜೀ ಚಿತಾಭಸ್ಮ ವಿಸರ್ಜನೆ ಸಂಧರ್ಭದಲ್ಲಿ ಅವರ ಆರೋಗ್ಯದಲ್ಲಿ ವ್ಯತ್ಯಾಸ ಇತ್ತು.

    ಅವರನ್ನು ಮುಟ್ಟಿದ ಸಂಧರ್ಭದಲ್ಲಿ ಅನುಭವವಾಗುತ್ತಿತ್ತು. ಅನಂತ ಕುಮಾರ್ ಆತ್ಮಕ್ಕೆ‌ ದೇವರು ಸದ್ಗತಿ ನೀಡಲಿ ಎಂದು ಸಂತಾಪ ಸೂಚಿಸಿದರು.

    Video..

    Share Information
    Advertisement
    Click to comment

    You must be logged in to post a comment Login

    Leave a Reply