Connect with us

    DAKSHINA KANNADA

    ಭಾರತೀಯ ಸೇನೆ ಬಗ್ಗೆ ಅವಹೇಳನಕಾರಿ ಭಾಷಣ ಎಸ್ ಡಿಪಿಐ ವಿರುದ್ದ ದೂರು

    ಪುತ್ತೂರು

    ಭಾರತೀಯ ಸೇನೆ ಬಗ್ಗೆ ಅವಹೇಳನಕಾರಿ ಭಾಷಣ ಎಸ್ ಡಿಪಿಐ ವಿರುದ್ದ ದೂರು

    ಪುತ್ತೂರು ಸೆಪ್ಟೆಂಬರ್ 20: ಪುತ್ತೂರಿನಲ್ಲಿ ನಡೆದ ಎಸ್ ಡಿಪಿಐ ಪ್ರತಿಭಟನೆಯಲ್ಲಿ ಭಾರತೀಯ ಸೇನೆಯ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ ಎಂದು ಎಸ್ ಡಿಪಿಐ ಸಂಘಟನೆಯ ಮೇಲೆ ದೂರು ದಾಖಲಾಗಿದೆ.

    ಪುತ್ತೂರು ಹಿಂದೂ ಜಾಗರಣೆ ವೇದಿಕೆಯ ಉಪಾಧ್ಯಕ್ಷರಾದ ದಿನೇಶ್ ಪಂಜಿಗ ಎಂಬವರು ಈ ಬಗ್ಗೆ ಪುತ್ತೂರು ನಗರ ಠಾಣೆಗೆ ಲಿಖಿತ ದೂರು ನೀಡಿದ್ದಾರೆ. ಎಸ್ ಡಿಪಿಐ ನ ಮುಖಂಡರುಗಳಾದ ಜಾಬೀರ್ ಅರಿಯಡ್ಕ ಸಿದ್ದಿಕ್ ,ಬಷೀರ್ ಕೂರ್ನಡ್ಕ ಎಂಬವರು ಪ್ರತಿಭಟನ ಸಭೆಯಲ್ಲಿ ಭಾರತದ ಸೈನಿಕರ ವಿರುದ್ದ ಅವಹೇಳನಕಾರಿಯಾಗಿ ಮಾತನಾಡಿ ಭಾರತೀಯ ಸೈನಿಕರ ಮತ್ತು ಸೈನ್ಯ ವ್ಯವಸ್ಥೆಯನ್ನು ಅವಮಾನಿಸಿ ಕೋಮು ಪ್ರಚೋದನಕಾರಿಯಾಗಿ ಮಾತನಾಡಿದ್ದಾರೆ ಎಂದು ದೂರಿನಲ್ಲಿ ಅಪಾದನೆ ಮಾಡಲಾಗಿದೆ.

    Share Information
    Advertisement
    Click to comment

    You must be logged in to post a comment Login

    Leave a Reply