Connect with us

    LATEST NEWS

    ಮಂಗಳೂರು – ಸರ್ವಿಸ್ ಬಸ್ ನಿಲ್ದಾಣದಿಂದಲೇ ಸಿಟಿಬಸ್ ಕಾರ್ಯಾಚರಣೆ

    ಮಂಗಳೂರು ಎಪ್ರಿಲ್ 1: ಟ್ರಾಫಿಕ್ ದಟ್ಟಣೆ ಹಾಗೂ ಹೊಸದಾಗಿ ನಿರ್ಮಿಸಲಾಗಿರುವ ಸರ್ವಿಸ್ ಬಸ್ ನಿಲ್ದಾಣ ಪೂರ್ಣ ಉಪಯೋಗಕ್ಕಾಗಿ ಸ್ಟೇಟ್‌ಬ್ಯಾಂಕ್ ಬಳಿ ಸಿಟಿ ಬಸ್ ನಿಲುಗಡೆಯನ್ನು ಸಂಪೂರ್ಣವಾಗಿ ನಿರ್ಬಂಧಿಸಲಾಗಿದ್ದು. ಎಲ್ಲಾ ಸಿಟಿ ಬಸ್‌ಗಳು ಸರ್ವಿಸ್ ಬಸ್ ನಿಲ್ದಾಣದಿಂದಲೇ ಸಂಚಾರ ಆರಂಭಿಸಲು ಪೊಲೀಸ್ ಇಲಾಖೆ ಸೂಚಿಸಿದೆ.


    ಇಂದಿನಿಂದಲೇ ಸಿಟಿ ಬಸ್ ಗಳು ಸ್ಟೆಟ್ ಬ್ಯಾಂಕ್ ಬಳಿಯ ರಸ್ತೆಗೆ ಬರುವಂತಿಲ್ಲ. ಬದಲಾಗಿ ಪಕ್ಕದ ಸರ್ವಿಸ್ ಬಸ್ ನಿಲ್ದಾಣದಿಂದಲೇ ಸಂಚರಿಸಲಿವೆ. ನಗರದ ಹ್ಯಾಮಿಲ್ಟನ್ ಸರ್ಕಲ್‌ನಿಂದ ರಾವ್ ಆ್ಯಂಡ್ ರಾವ್ ಸರ್ಕಲ್‌ವರೆಗೆ ಯಾವುದೇ ಬಸ್‌ಗಳ ನಿಲುಗಡೆ ಅಥವಾ ಸಂಚಾರಕ್ಕೆ ಅವಕಾಶ ಇಲ್ಲ.

    ಸಂಚಾರ ದಟ್ಟಣೆ ಕಡಿಮೆ ಮಾಡುವ ಸಲುವಾಗಿ ಪೊಲೀಸರು ಹೊರ ನಿಯಮಾವಳಿ ರೂಪಿಸಿದರೂ ಸಾಕಷ್ಟು ಮುನ್ಸೂಚನೆ ನೀಡದ ಕಾರಣ ಮೊದಲ ದಿನವೇ ಸಮಸ್ಯೆ, ಗೊಂದಲ ಸೃಷ್ಟಿಯಾಗಿದೆ. ಪೊಲೀಸರು ಏಕಾಏಕಿ ಈ ಹೊಸ ನಿಯಮಾವಳಿ ರೂಪಿಸಿದ ಕಾರಣ ವಿದ್ಯಾರ್ಥಿಗಳಿಗೆ ತುಂಬಾ ತೊಂದರೆಯಾಗಿವೆ

    Share Information
    Advertisement
    Click to comment

    You must be logged in to post a comment Login

    Leave a Reply