LATEST NEWS
ಗಂಟಲಲ್ಲಿ ಚಾಕಲೇಟ್ ಸಿಲುಕಿ ಬಾಲಕ ಸಾವು
ಮಂಗಳೂರು: ಗಂಟಲಲ್ಲಿ ಚಾಕಲೇಟ್ ಸಿಲುಕಿದ ಪರಿಣಾಮ ಬಾಲಕನೋರ್ವ ಉಸಿರುಗಟ್ಟಿ ಸಾವನಪ್ಪಿರುವ ಘಟನೆ ಮಂಗಳೂರಿನಲ್ಲಿ ನಡೆದಿದೆ.
ಮಂಗಳೂರು ಹೊರವಲಯದ ಉಳ್ಳಾಲ ಸೋಮೇಶ್ವರ ಗ್ರಾಮದ ಉಚ್ಚಿಲ ಗುಡ್ಡದಲ್ಲಿ ಈ ದುರ್ಘಟನೆ ನಡೆದಿದೆ.ರಹೀಂ ಎಂಬವರ ಮಗ 8 ವರ್ಷದ ಪೈಝಾನ್ ಮೃತ ಬಾಲಕ.
ಪೈಝಾನ್ ಸೋಮೇಶ್ವರ ಗ್ರಾಮದ ಉಚ್ಚಿಲ ಗುಡ್ಡ ಸೈಕಲ್ ಇಬ್ರಾಹಿಂ ರವರ ಮೊಮ್ಮಗ ರಹೀಂ ಎಂಬವರ ಮಗನಾಗಿದ್ದಾನೆ. ಮನೆಯಲ್ಲಿ ಬಾಲಕನು ಚಾಕಲೇಟ್ ತಿನ್ನುತ್ತಿದ್ದ ಸಂದರ್ಭದಲ್ಲಿ ಬಾಯಲ್ಲಿದ್ದ ಚಾಕಲೇಟ್ ಹಠತ್ತಾಗಿ ಜಾರಿ ಗಂಟಲಲ್ಲಿ ಸಿಲುಕಿದೆ.
ಬಾಲಕನಿಗೆ ಉಸಿರಾಡಲು ಕಷ್ಟವಾಗಿದ್ದನ್ನು ಗಮನಿಸಿದ ಮನೆಯವರು ಕೂಡಲೇ ಆಸ್ಪತ್ರೆಗೆ ಸಾಗಿಸಲು ಯತ್ನಿಸಿದಾಗ ಬಾಲಕ ಮೃತಪಟ್ಟಿದ್ದಾನೆ.
You must be logged in to post a comment Login