Connect with us

    KARNATAKA

    ಹಾಡುಹಗಲೇ ದರೋಡೆಗೆ ಬಂದವರು ಅಗ್ನಿಶಾಮಕ ದಳದ ಸೈರನ್ ಕೇಳಿ ಎಸ್ಕೇಪ್…!!

    ಚಿಕ್ಕಮಗಳೂರು: ಚಿಕ್ಕಮಗಳೂರಿನ ಎಐಟಿ ಸರ್ಕಲ್ ಸಮೀಪ ಮನೆಯೊಂದರ ದರೋಡೆಗೆ ಮಾಡಲು ಸಿನಿಮಾ ಸ್ಟೈಲ್​ನಲ್ಲಿ ಚಾಕು-ಚೂರಿ ಹಿಡಿದು ಬಂದ ಕಳ್ಳರಿಬ್ಬರು ಅಗ್ನಿಶಾಮಕದಳದ ಗಾಡಿಯ ಸೈರನ್ ಕೇಳಿ ಪೊಲೀಸರೆಂದು ಭಾವಿಸಿ ಸಿಕ್ಕಿ ಬಿದ್ದ ಘಟನೆ ನಡೆದಿದೆ.


    ಚಾಕು-ಚೂರಿ ಹಿಡಿದು ಸಿಡಿಎ ಮಾಜಿ ಅಧ್ಯಕ್ಷ ಚಂದ್ರೇಗೌಡರ ಮನೆಗೆ ನುಗ್ಗಿದ ಮುಸುಕುಧಾರಿಗಳಿಬ್ಬರು ಮನೆಯ ಮಹಿಳೆಯನ್ನ ಕಟ್ಟಿಹಾಕಿ ದರೋಡೆ ಮಾಡುತ್ತಿದ್ದರು. ಅಷ್ಟರಲ್ಲಿ ಮಹಿಳೆಯ ಮಗ ಮನೆಗೆ ಎಂಟ್ರಿ ಕೊಡುತ್ತಿದ್ದಂತೆ ದರೋಡೆ ಯತ್ನ ಬಯಲಾಗಿದೆ. ಕೂಡಲೇ ಆತ ಸ್ಥಳೀಯರನ್ನ ಕೂಗಿಕೊಂಡಿದ್ದು, ಹತ್ತಿರ ಬಂದರೆ ಚುಚ್ಚುವಂತೆ ಕೈಯಲ್ಲೇ ಚೂರಿ ಹಿಡಿದುಕೊಂಡು ಕಳ್ಳರಿಬ್ಬರೂ ಹೊರ ಬಂದು ಬೈಕ್​ ಹತ್ತಿ ಎಸ್ಕೇಪ್​ ಆಗಲು ಮುಂದಾದರು.


    ಅಷ್ಟರಲ್ಲಿ ಸ್ಥಳಕ್ಕೆ ಸೈರನ್​ ಕೂಗಿಕೊಂಡು ಅಗ್ನಿಶಾಮಕ ವಾಹನ ಸ್ಥಳಕ್ಕೆ ಬರುತ್ತಿದ್ದಂತೆ ಬೈಕ್​ ಬಿಟ್ಟು ಚೂರಿ ಹಿಡಿದುಕೊಂಡೇ ಎಸ್ಕೇಪ್​ ಆಗಲು ಕಾಲ್ಕಿತ್ತರು. ದರೋಡೆಕೋರರನ್ನ ಹಿಂಬಾಲಿಸಿದ ಸ್ಥಳೀಯರು ಕಲ್ಲು ತೂರಾಟ ನಡೆಸಿದರು. ಬೆನ್ನುಬಿದ್ದ ಪೊಲೀಸರು ಕಳ್ಳರನ್ನು ಹಿಡಿಯುವಲ್ಲಿ ಯಶಸ್ವಿಯಾದರು. ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ದರೋಡೆಕೋರರು ತಪ್ಪಿಸಿಕೊಳ್ಳಲು ಹೋಗಿ ಸಿಕ್ಕಿಬಿದ್ದ ದೃಶ್ಯ ವೈರಲ್​ ಆಗಿದೆ. ಹಾಡಹಗಲೇ ದರೋಡೆಗೆ ಯತ್ನಿಸಿರುವ ಪ್ರಕರಣ ಸ್ಥಳೀಯರನ್ನು ಬೆಚ್ಚಿಬೀಳಿಸಿದೆ.

    Share Information
    Advertisement
    Click to comment

    You must be logged in to post a comment Login

    Leave a Reply