KARNATAKA
ಚಿಕ್ಕಬಳ್ಳಾಪುರ – ಕಾರು ಮತ್ತು ಬಸ್ ನಡುವೆ ಭೀಕರ ಅಪಘಾತದಲ್ಲಿ ಕಾರಿಗೆ ಬೆಂಕಿ – ಇಬ್ಬರು ಸಜೀವ ದಹನ

ಚಿಕ್ಕಬಳ್ಳಾಪುರ ಮಾರ್ಚ್ 09: ಬಸ್ ಮತ್ತು ಕಾರಿನ ನಡುವೆ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಕಾರು ಬೆಂಕಿಗಾಹುತಿಯಾದ ಘಟನೆ ನಡೆದಿದ್ದು, ಕಾರಿನಲ್ಲಿದ್ದ ಇಬ್ಬರು ಸಜೀವ ದಹನಗೊಂಡ ಹೃದಯ ವಿದ್ರಾವಕ ಘಟನೆ ಚಿಂತಾಮಣಿ ತಾಲೂಕು ಕಂಚರ್ಲ ಹಳ್ಳಿ ಪೊಲೀಸ್ ಸ್ಟೇಷನ್ ವ್ಯಾಪ್ತಿಯ ಚಿಂತಾಮಣಿ- ಮದನಪಲ್ಲಿ ಮಾರ್ಗದ ಗೋಪಲ್ಲಿ ಬಳಿ ರವಿವಾರ ಬೆಳಗ್ಗೆ ಸಂಭವಿಸಿದೆ.
ಮೃತರನ್ನು ಆಂಧ್ರ ಪ್ರದೇಶದ ಕಡಪ ಮೂಲದ ಧನಂಜಯ ರೆಡ್ಡಿ(50) ಹಾಗೂ ಕಲಾವತಿ(42) ಎಂದು ತಿಳಿದುಬಂದಿದೆ. ಗೋಪಲ್ಲಿ ಬಳಿ ಇಂದು ಬೆಳಗ್ಗೆ ಕಾರು ಮತ್ತು ಬಸ್ ಮಧ್ಯೆ ಅಪಘಾತ ಸಂಭವಿಸಿದೆ. ಅಪಘಾತದ ತೀವ್ರತೆಗೆ ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಕಾರು ಸಂಪೂರ್ಣ ಬೆಂಕಿಗಾಹುತಿಯಾಗಿದ್ದು, ಅದರೊಳಗೆ ಸಿಲುಕಿದ ಧನಂಜಯ ರೆಡ್ಡಿ ಮತ್ತು ಕಲಾವತಿ ಸಜೀವ ದಹನಗೊಂಡಿದ್ದಾರೆ.

3 Comments