BANTWAL
ಜಾನುವಾರು ಕಳ್ಳಸಾಗಾಟ ತಡೆದ ಹಿಂಜಾವೇ ಕಾರ್ಯಕರ್ತರು
ಬಂಟ್ವಾಳ, ಎಪ್ರಿಲ್ 14 : ಹಿಂದೂ ಜಾಗರಣ ವೇದಿಕೆಯ ಕಾರ್ಯಕರ್ತರು ಏಪ್ರಿಲ್ 13 ರ ಮಂಗಳವಾರ, ಅಕ್ರಮ ಗೋವು ಕಳ್ಳಸಾಗಣೆಯಲ್ಲಿ ತೊಡಗಿರುವ ವ್ಯಕ್ತಿಯನ್ನು ಹಿಡಿದು ವಶಕ್ಕೆ ಪಡೆದ ಘಟನೆ ಬಂಟ್ವಾಳ ತಾಲ್ಲೂಕಿನ ವಿಟ್ಲದ ಕಾಶಿಮಠದಲ್ಲಿ ನಡೆದಿದೆ.
ಕೇರಳ ನೋಂದಣಿ ಸಂಖ್ಯೆ ಹೊಂದಿರುವ ಮಾಣಿ ಮುಲಿಬೈಲಿನ ವ್ಯಕ್ತಿಯೋರ್ವ ತನ್ನ ವಾಹನದಲ್ಲಿ ಗೋವುಗಳನ್ನು ಅಕ್ರಮವಾಗಿ ಸಾಗಿಸುತ್ತಿದ್ದ, ಇದು ಅಕ್ರಮ ಸಾಗಾಟವಲ್ಲ ಎಂದು ನೋಡುವವರಿಗೆ ಕಾಣಿಸಬೇಕೆಂಬ ಉದ್ದೇಶದಿಂದ ಆರೋಪಿ ಹಸುವಿನೊಂದಿಗೆ ಕರುವನ್ನು ಕೂಡಾ ಕೊಂಡೊಯ್ಯುತ್ತಿದ್ದ ಎಂದು ಹೇಳಲಾಗಿದೆ. ಈ ಬಗ್ಗೆ ಮಾಹಿತಿ ತಿಳಿದ ಹಿಂಜಾವೇ ಕಾರ್ಯಕರ್ತರು ವಾಹನವನ್ನು ತಡೆದು ಗೋವುಗಳನ್ನು ರಕ್ಷಿಸಿದ್ದಾರೆ.
You must be logged in to post a comment Login