LATEST NEWS
ಬೈಂದೂರು – ಆಯತಪ್ಪಿ ನದಿಗೆ ಬಿದ್ದ ಮಗನನ್ನು ರಕ್ಷಿಸಲು ಹೋದ ತಾಯಿಯೂ ನೀರುಪಾಲು
ಉಡುಪಿ ಸೆಪ್ಟೆಂಬರ್ 11: ನದಿಗೆ ಬಿದ್ದು ತಾಯಿ ಮಗ ಇಬ್ಬರೂ ಸಾವನಪ್ಪಿರುವ ಧಾರುಣ ಘಟನೆ ಬೈಂದೂರು ತಾಲೂಕಿನ ನಾವುಂದದಲ್ಲಿ ನಡೆದಿದೆ.
ಮೃತರನ್ನು ನಾವುಂದದ ನೋಯೆಲ್ ಚುಂಗಿಗುಡ್ಡೆ ನಿವಾಸಿ ಶಾನ್ (11) ರೊಸಾರಿಯಾ(35) ಎಂದು ಗುರುತಿಸಲಾಗಿದ್ದು, ಇಬ್ಬರು ನದಿ ಪಕ್ಕದಲ್ಲಿ ಹೋಗುತ್ತಿದ್ದಾಗ ಬಾಲಕ ಆಯತಪ್ಪಿ ನೀರಿಗೆ ಬಿದ್ದಿದ್ದಾನೆ. ಈ ಸಂದರ್ಭ ಮಗುವನ್ನು ರಕ್ಷಿಸಲು ತಾಯಿಯೂ ನೀರಿಗೆ ಹಾರಿದ್ದು, ಇಬ್ಬರೂ ನೀರುಪಾಲಾಗಿದ್ದಾರೆ.
ಘಟನೆ ನಡೆದ ಸ್ಥಳದಲ್ಲಿ ಶಾನ್ ಮೃತದೇಹ ಪತ್ತೆಯಾಗಿದ್ದು, ಬಳಿಕ ಅಗ್ನಿಶಾಮಕದಳದ ಸಿಬ್ಬಂದಿ ಮಹಿಳೆ ಮೃತದೇಹವನ್ನು ಪತ್ತೆ ಮಾಡಿದ್ದಾರೆ. ಗಂಗೊಳ್ಳಿ ಪೊಲೀಸರು ಸ್ಥಳಕ್ಕೆ ಆಗಮಿಸಿ ಪ್ರಕರಣ ದಾಖಲಿಸಿದ್ದಾರೆ.
You must be logged in to post a comment Login