Connect with us

    LATEST NEWS

    ವಿಜಯೇಂದ್ರ ದೆಹಲಿಗೆ ಹೋಗಿದ್ದು ವೈಯಕ್ತಿಕ ಕೆಲಸದ ಮೇಲೆ – ಸಂಸದ ಬಿವೈ ರಾಘವೇಂದ್ರ

    ಉಡುಪಿ ಜೂನ್ 8: ಬಿಜೆಪಿ ಉಪಾಧ್ಯಕ್ಷ ವಿಜಯೇಂದ್ರ ಅವರನ್ನು ಡಿಸಿಎಂ , ರಾಜ್ಯಾಧ್ಯಕ್ಷರನ್ನಾಗಿ ಮಾಡುವುದು ಎಲ್ಲಾ ತಪ್ಪು ಕಲ್ಪನೆಯಾಗಿದ್ದು. ವಿಜಯೇಂದ್ರ ದೆಹಲಿಗೆ ಹೋಗಿದ್ದು ವೈಯಕ್ತಿಕ ಕೆಲಸದ ಮೇಲೆ ಎಂದು ಸಂಸದ ಬಿವೈ ರಾಘವೇಂದ್ರ ಹೇಳಿದ್ದಾರೆ.
    ಉಡುಪಿಯಲ್ಲಿ ಮಾತನಾಡಿದ ಅವರು ವಿಜಯೇಂದ್ರ ದೆಹಲಿ ಪ್ರವಾಸದ ಬಗ್ಗೆ ಎದ್ದಿರುವ ಊಹಾಪೋಹಗಳು ಸಂಪೂರ್ಣ ಸುಳ್ಳಾಗಿದ್ದು, ಪಕ್ಷದ ಉಪಾಧ್ಯಕ್ಷ ಹಿರಿಯರನ್ನು ಭೇಟಿ ಮಾಡುವುದು ಸಹಜ ಎಂದರು.


    ಅಲ್ಲದೆ ಪಕ್ಷ ನಮ್ಮ ತಂದೆಯನ್ನು ಮುಖ್ಯಮಂತ್ರಿಯನ್ನಾಗಿ ಮಾಡಿದೆ, ನನ್ನನ್ನು ಎಂಪಿ, ಸಹೋದರ ವಿಜಯೇಂದ್ರ ಉಪಾಧ್ಯಕ್ಷರಾಗಿದ್ದಾರೆ. ಸಂಘಟನೆ ಇಷ್ಟೆಲ್ಲಾ ಅವಕಾಶವನ್ನು ಕೊಟ್ಟದ್ದು ತೃಪ್ತಿಯಿದೆ ಎಂದ ಅವರು ವಿಜಯೇಂದ್ರನನ್ನು ಡಿಸಿಎಂ,ರಾಜ್ಯಾಧ್ಯಕ್ಷ ಮಾಡುವುದು ಇದೆಲ್ಲವೂ ತಪ್ಪುಕಲ್ಪನೆ ಎಂದು ಸ್ಪಷ್ಟಪಡಿಸಿದರು.

    ಪಕ್ಷದಲ್ಲಿ ಅವರದ್ದೇ ಆದ ಕೆಪ್ಯಾಸಿಟಿ ಇರುತ್ತದೆ, ಯಾರನ್ನ ಗುರುತಿಸಬೇಕು ಎಂದು ಪಕ್ಷಕ್ಕೆ ಗೊತ್ತಿದೆ. ಈ ಚೌಕಟ್ಟಿನಲ್ಲಿ ಸಿಎಂ ಮಾತನಾಡಿದ್ದಾರೆ, ಸಿಎಂ ಮಾತಿಗೆ ಬೇರೆ ಅರ್ಥ ಕಲ್ಪಿಸುವುದು ಬೇಡ ಎಂದು ಉಡುಪಿಯಲ್ಲಿ ಸಂಸದ ಬಿವೈ ರಾಘವೇಂದ್ರ ಹೇಳಿದರು.

    Share Information
    Advertisement
    Click to comment

    You must be logged in to post a comment Login

    Leave a Reply