LATEST NEWS
ಬಸ್ ಚಲಾಯಿಸುತ್ತಿದ್ದಾಗಲೇ ಕುಸಿದು ಬಿದ್ದ ಚಾಲಕ…ಚಾಲಕನ ಸಮಯ ಪ್ರಜ್ಞೆಯಿಂದ ಪ್ರಯಾಣಿಕರು ಪಾರು
ಮಂಗಳೂರು ಜುಲೈ 22: ಖಾಸಗಿ ಸಿಟಿಬಸ್ ಚಲಾಯಿಸುತ್ತಿರುವ ಸಂದರ್ಭ ಬಸ್ಸಿನ ಚಾಲಕ ಅಸ್ವಸ್ಥಗೊಂಡು ಕುಸಿದು ಬಿದ್ದ ಘಟನೆ ನಡೆದಿದ್ದು, ಬಸ್ ನಲ್ಲಿದ್ದ ಪ್ರಯಾಣಿಕರು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಪುತ್ತೂರಿನಿಂದ ಮಂಗಳೂರಿನ ಸ್ಟೇಟ್ ಬ್ಯಾಂಕಿಗೆ ಬರುತ್ತಿದ್ದ ಸೇಫ್ ವೇ ಟ್ರಾವೆಲ್ಸ್ ಹೆಸರಿನ ಖಾಸಗಿ ಬಸ್ ಅಡ್ಯಾರ್ ಸಮೀಪಿಸುತ್ತಿದ್ದಂತೆ ಚಾಲಕನಿಗೆ ಕಣ್ಣು ಮಂಜಾಗಿದ್ದು ತಕ್ಷಣ ಬಸ್ ನಿಲ್ಲಿಸಿದ್ದಾನೆ. ಚಾಲಕನಿಗೆ ಕಣ್ಣು ಮಂಜಾಗುತ್ತಲೇ ಬಸ್ ಹೆದ್ದಾರಿ ಬದಿಯ ಸಹ್ಯಾದ್ರಿ ಕಾಲೇಜಿನ ಗೇಟ್ ಮುಂಭಾಗದಲ್ಲಿಯೇ ಬಸ್ ನಿಂತಿದೆ.
ಬಸ್ನಲ್ಲಿ ಜನರು ತುಂಬಿದ್ದು, ಚಾಲಕನ ನಿಯಂತ್ರಣ ಸ್ಪಲ್ಪ ತಪ್ಪುತ್ತಿದ್ದರೂ ಪ್ರಾಣಾಪಾಯ ಸಂಭಂವಿಸುತ್ತಿತ್ತು. ಬಸ್ ನಿಲ್ಲಿಸಿದ ನಂತರ ಚಾಲಕ ಕೆಳಗೆ ಬೀಳುತ್ತಿದ್ದಂತೆ ಸ್ಟೇರಿಂಗ್ನ ಎಡೆಯಿಂದ ಚಾಲಕನನ್ನು ಎಳೆದಿದ್ದಾರೆ. ಬಸ್ ಚಾಲಕನನ್ನು ಪುತ್ತೂರು ಮೂಲಕ ಸಂತೋಷ್ ಎಂದು ಗುರುತಿಸಲಾಗಿದೆ.
ಚಾಲಕ ಸಂತೋಷ್ ಒಂದು ವರ್ಷದಿಂದ ಅದೇ ಬಸ್ನಲ್ಲಿ ಕೆಲಸ ಮಾಡುತ್ತಿದ್ದು, ಬಸ್ ಕೂಡ ಸಾಕಷ್ಟು ವೇಗದಲ್ಲಿ ಚಲಿಸುತ್ತಿತ್ತು. ಆದ್ರೆ ಸಂತೋಷ್ ಅವರ ಸಮಯ ಪ್ರಜ್ಞೆಯಿಂದ ದುರಂತ ತಪ್ಪಿ ಹೋಗಿದೆ ಎಂದು ಬಸ್ನ ಕಂಡಕ್ಟರ್ ಶೇಖರ್ ಹೇಳಿದ್ದಾರೆ.
You must be logged in to post a comment Login