Connect with us

LATEST NEWS

ಮಂಗಳೂರು – ಬೈಕ್ ಡಿಕ್ಕಿಯಾಗಿ ನಡುರಸ್ತೆಯಲ್ಲೇ ಹೊತ್ತಿ ಉರಿದ ಬಸ್ ಹಾಗೂ ಬೈಕ್

ಮಂಗಳೂರು ಎಪ್ರಿಲ್ 08: ಬೈಕ್ ಹಾಗೂ ಬಸ್ ನಡುವೆ ನಡೆದ ಅಪಘಾತದಲ್ಲಿ ಬೆಂಕಿ ಹೊತ್ತಿಕೊಂಡ ಪರಿಣಾಮ ಬೈಕ್ ಹಾಗೂ ಬಸ್ ಎರಡೂ ಸುಟ್ಟು ಬಸ್ಮವಾದ ಘಟನೆ ಮಂಗಳೂರಿನ ಹಂಪನಕಟ್ಟೆಯಲ್ಲಿ ನಡೆದಿದೆ.


ಬೈಕ್ ಒಂದು ಬಸ್ ಗೆ ಡಿಕ್ಕಿ ಹೊಡೆದ ಕಾರಣ ಬೈಕ್ ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಈ ಕೂಡಲೇ ಜನರು ಬಸ್ ನಿಂದ ಇಳಿದಿದ್ದಾರೆ.

ಆದರೆ ಬೆಂಕಿಯ ಕೆನ್ನಾಲೆ ಹೆಚ್ಚಾಗಿ ಬಸ್ ಗೂ ಹಬ್ಬಿದ ಹಿನ್ನಲೆ ಬಸ್ ಭಾಗಶಃ ಸುಟ್ಟು ಹೋಗಿದೆ. ಬಿಸಿಲಿನ ತಾಪಕ್ಕೆ ಹೆಚ್ಚಾಗಿದ್ದ ಬೆಂಕಿಯ ತೀವ್ರತೆ ಹೆಚ್ಚಾಗಿದ್ದು. ಬೆಂಕಿ ಆರಿಸಲು ಸಾರ್ವಜನಿಕರು ಪ್ರಯತ್ನಿಸಿದ್ದಾರೆ. ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳ ಬೆಂಕಿ ನಂದಿಸುವ ಕಾರ್ಯ ಮಾಡಿದ್ದಾರೆ. ಈ ಘಟನೆಯಿಂದ ಯಾವುದೇ ಜೀವ ಹಾನಿಯಿಲ್ಲ.

Advertisement
Click to comment

You must be logged in to post a comment Login

Leave a Reply