Connect with us

    LATEST NEWS

    ಮಲ್ಪೆಯಲ್ಲಿ ತಮಿಳುನಾಡು ಮೀನುಗಾರರಿಂದ ಗುಂಡಾಗಿರಿ…!

    ಉಡುಪಿ, ಅಕ್ಟೋಬರ್ 22: ಉಡುಪಿಯ ಮಲ್ಪೆ ಬಂದರಿನಲ್ಲಿ ತಮಿಳುನಾಡಿನ ಮೀನುಗಾರರಿಂದ ಗುಂಡಾಗಿರಿ ನಡೆದಿದೆ. ಮಲ್ಪೆಯಿಂದ ತೆರಳಿ ಮೀನುಗಾರಿಕೆ ನಡೆಸುತ್ತಿದ್ದ ಬೋಟ್ ಗೆ ಹಾನಿಮಾಡಿದ್ದಾರೆ. ಕಾನೂನುಬಾಹಿರವಾಗಿ ಮೀನುಗಾರಿಕೆ ನಡೆಸುತ್ತಿದ್ದ ತಮಿಳುನಾಡು ಮೀನುಗಾರರು.

    ಲೈಟ್ ಅಳವಡಿಸಿ ಮೀನುಗಾರಿಕೆ ನಿಷೇಧವಿದ್ದರು, ಲೈಟ್ ಅಳವಡಿಸಿ ಮೀನು ಹಿಡಿಯುತ್ತಿದ್ದ ತಮಿಳು ಮೀನುಗಾರರು.ಇದರ ವಿರುದ್ಧ ಆಕ್ಷೇಪ ವ್ಯಕ್ತಪಡಿಸಿದ್ದಕ್ಕೆ ಸ್ಥಳೀಯ ಮಲ್ಪೆ ಮೀನುಗಾರರನ್ನು ತರಾಟೆ ತೆಗೆದುಕೊಂದಿದ್ದಾರೆ, ಹಾಗೆ ಮಲ್ಪೆಯಿಂದ ತೆರಳಿದ್ದ ಬೋಟಿಗೆ ಹಾನಿ ಮಾಡಿದ್ದಾರೆ.

    ತಮಿಳುನಾಡಿನ ಮೀನುಗಾರರ ಗುಂಡಾ ವರ್ತನೆಯನ್ನು ಖಂಡಿಸಿ, ಸ್ಥಳೀಯ ಮೀನುಗಾರರು ತೀವ್ರ ಆಕ್ಷೇಪ ವ್ಯಕ್ತಪಡಿಸಿ ದಿಡೀರ್ ಪ್ರತಿಭಟನೆಗಿಳಿದಿದ್ದಾರೆ . ಆಳ ಸಮುದ್ರಕ್ಕೆ ತೆರಳಿದ್ದ ಎಲ್ಲಾ ಬೋಟುಗಳು ವಾಪಸ್ ಬಂದು ಪ್ರತಿಭಟನೆಯಲ್ಲಿ ಭಾಗವಹಿಸಿದ್ದಾರೆ.
    ಈ ಹಿನ್ನಲೆ ಯಲ್ಲಿ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು. ಸದ್ಯ ಸ್ಥಳಕ್ಕೆ ಬಂದ ಕರಾವಳಿ‌ಕಾವಲು ಪಡೆ ಪೊಲೀಸರು ಪರಿಸ್ಥಿತಿ ನಿಭಾಯಿಸುತ್ತಿದ್ದಾರೆ .

    Share Information
    Advertisement
    Click to comment

    You must be logged in to post a comment Login

    Leave a Reply