Connect with us

LATEST NEWS

ನಿಂತಿದ್ದ ಗೂಡ್ಸ್ ರೈಲಿನ ಮೇಲೆ ಸೆಲ್ಫಿ…ಕರೆಂಟ್ ಶಾಕ್ ಸುಟ್ಟು ಹೋದ ಬಾಲಕನ ಅರ್ಧ ದೇಹ…!!

ಮಂಗಳೂರು ಎಪ್ರಿಲ್ 14: ನಿಂತಿದ್ದ ಗೂಡ್ಸ್ ರೈಲಿನ ಬೋಗಿ ಮೇಲೆ ಸೆಲ್ಫಿ ತೆಗೆಯಲು ಹೋಗಿ ಕರೆಂಟ್ ಹೊಡೆದು ಬಾಲಕನೊಬ್ಬ ಅರ್ಧ ಸುಟ್ಟು ಹೋದ ಘಟನೆ ಬಜ್ಪೆ ಸಮೀಪದ ಕೆಂಜಾರು ಗೂಡ್ಸ್ ರೈಲ್ವೆ ಜಂಕ್ಷನ್ ನಲ್ಲಿ ನಡೆದಿದ್ದು, ಬಾಲಕನ ಸ್ಥಿತಿ ಗಂಭಿರವಾಗಿದೆ ಎಂದು ತಿಳಿದು ಬಂದಿದೆ.


ಗಂಭೀರ ಗಾಯಗೊಂಡ ಬಾಲಕನನ್ನು ಜೋಕಟ್ಟೆ ಎಚ್ ಪಿಸಿಎಲ್ ಕಾಲನಿಯ ಮಹಮ್ಮದ್ ಇಕ್ಬಾಲ್ ಎಂಬವರ ಪುತ್ರ ಮಹಮ್ಮದ್ ದಿಶಾನ್ (16) ಎಂದು ಗುರುತಿಸಲಾಗಿದೆ. ದಿಶಾನ್ ತನ್ನ ಸ್ನೇಹಿತರೊಂದಿಗೆ ಮನೆ ಹತ್ತಿರವೇ ಇದ್ದ ಗೂಡ್ಸ್ ಜಂಕ್ಷನ್ ನಲ್ಲಿ ನಿಂತಿದ್ದ ಎಲ್ ಪಿಜಿ ಟ್ಯಾಂಕರ್ ವ್ಯಾಗನ್ ಮೇಲೆ ಹತ್ತಿ ಸೆಲ್ಫಿ ತೆಗೆಯಲು ಹೋಗಿದ್ದಾನೆ.

ವ್ಯಾಗನ್ ಮೇಲೆಯ ರೈಲ್ವೆಯ ವಿದ್ಯುತ್ ತಂತಿ ಇದ್ದು, ಅದರ ಅರಿವಿಲ್ಲದೆ ಬಾಲಕ ಸೆಲ್ಫಿಗೆ ಕೈ ಎತ್ತಿದ್ದಾನೆ. ಈ ಸಂದರ್ಭ ಬಾಲಕನ ಕೈ ವಿದ್ಯುತ್ ತಂತಿಗೆ ತಗುಲಿದ್ದು, ಬಾಲಕನಿಗೆ ಕರೆಂಟ್ ಹೊಡೆದಿದೆ. ಹೈ ವೋಲ್ಟೆಜ್ ಲೈನ್ ಆಗಿರುವ ಕಾರಣ ಬಾಲಕನ ದೇಹದ 50 ರಷ್ಟು ಬಾಗ ಸುಟ್ಟು ಹೋಗಿದ್ದು, ಬಾಲಕ ವ್ಯಾಗನ್ ನಿಂದ ಕೆಳಗೆ ಬಿದ್ದಿದ್ದಾನೆ. ಕೂಡಲೇ ಜೊತೆಯಲ್ಲಿದ್ದ ಸ್ನೇಹಿತರು ಸಹಾಯಕ್ಕಾಗಿ ಕೂಗಾಡಿದ್ದು, ಸ್ಥಳೀಯರು ಆಗಮಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ.

Share Information
Continue Reading
Advertisement
Click to comment

Leave a Reply

Your email address will not be published. Required fields are marked *