DAKSHINA KANNADA
ಪೇರಳೆ ಹಣ್ಣು ಕೀಳಲು ಹೋಗಿ ಮರದಿಂದ ಬಿದ್ದು 8 ವರ್ಷದ ಬಾಲಕ ಸಾವು
ಕಾಣಿಯೂರು:ಶಾಲೆಯಿಂದ ಬಂದು ಪೇರಳೆ ಹಣ್ಣನ್ನು ಕೀಳಲು ಮರ ಹತ್ತಲು ಹೋಗಿ ಬಾಲಕನೊಬ್ಬ ಉರುಳಿ ಬಿದ್ದು ಸಾವನಪ್ಪಿರುವ ಘಟನೆ ಕಡಬ ತಾಲೂಕಿನ ಕಾಣಿಯೂರು ಸಮೀಪದ ದೋಳ್ಪಾಡಿ ಬಳಿ ನಡೆದಿದೆ.
ಮೃತ ಬಾಲಕನನ್ನು ದೋಳ್ಪಾಡಿ ಮರಕ್ಕಡ ನಿವಾಸಿ ದಿವಾಕರ ಗೌಡ ಎಂಬವರ ಪುತ್ರ ಉಲ್ಲಾಸ್ ಡಿ.ಎಂ (8) ಎಂದು ಗುರುತಿಸಲಾಗಿದೆ. ಬಾಲಕ ದೋಳ್ಪಾಡಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮೂರನೇ ತರಗತಿ ವಿದ್ಯಾರ್ಥಿಯಾಗಿದ್ದ.
You must be logged in to post a comment Login