Connect with us

    LATEST NEWS

    ಬಿ.ಜೆ.ಪಿ ಕೇರಳ ರಾಜ್ಯ ಕಾರ್ಯಾಲಯದ ಮೇಲೆ ದುಷ್ಕರ್ಮಿಗಳ ದಾಳಿ, ಕೂದಲೆಳೆಯ ಅಂತರದಲ್ಲಿ ಪಾರಾದ ರಾಜ್ಯಾಧ್ಯಕ್ಷ

    ತಿರುವನಂತಪುರಂ, ಜುಲೈ 28 : ಬಿ.ಜೆ.ಪಿ ಕೇರಳ ರಾಜ್ಯ ಕಾರ್ಯಾಲಯದ ಮೇಲೆ ದುಷ್ಕರ್ಮಿಗಳು ದಾಳಿ ನಡೆಸಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷ ಕುಮ್ಮನಂ ರಾಜಶೇಖರನ್ ಅವರ ವಾಹನ ಸೇರಿದಂತೆ,ಆರಕ್ಕೂ ವಾಹನಗಳು ದುಷ್ಕರ್ಮಿಗಳ ದಾಳಿಗೆ ಹಾನಿಗೊಳಗಾಗಿವೆ. ಕಲ್ಲು ತೂರಾಟ ಕೂಡ ನಡೆದಿದ್ದು ಕಚೇರಿಯ ಗಾಜುಗಳು ಒಡೆದುಹೋಗಿವೆ. ಬಿ.ಜೆ.ಪಿ ರಾಜ್ಯಾಧ್ಯಕ್ಷರು ಈ ಸಂದರ್ಭದಲ್ಲಿ ಪಕ್ಷದ ಕಚೇರಿಯಲ್ಲೇ ಇದ್ದರೂ ಕೂದಲೆಳೆಯಂತರದಿಂದ ಪಾರಾಗಿದ್ದಾರೆ ಎಂದು ತಿಳಿದು ಬಂದಿದೆ.
    ಸಿ.ಪಿ.ಐ ಎಂ ಅಂಗ ಸಂಘಟನೆಯಾದ ಡಿವೈ ಎಫ್ ಐ ರಾಜ್ಯ ಸಮಿತಿ ಸದಸ್ಯ ಎ.ಪಿ. ಬಿನು ಹಾಗೂ ಎಸ್ ಎಫ್ ಐ ಜಿಲ್ಲಾ ಕಾರ್ಯದರ್ಶಿ ಪ್ರಜಿತ್ ನ ನೇತೃತ್ವದಲ್ಲಿ ಆಕ್ರಮಣ ನಡೆಸಲಾಗಿದೆ ಆರೋಪಿಸಲಾಗಿದ್ದು ಉನ್ನತ ಮಟ್ಟದ ತನಿಖೆಗೆ ಆದೇಶಿಸಲಾಗಿದೆ. ಇದೀಗ ಪಕ್ಷದ ಕಚೇರಿಗೆ ಬಿಗಿ ಪೋಲಿಸ್ ಬಂದೋಬಸ್ತನ್ನು ಏರ್ಪಡಿಸಲಾಗಿದೆ.

    ದಾಳಿಯ ಸಿ ಸಿಟಿವಿ ಫೂಟೇಜ್ ವಿಡಿಯೋಗಾಗಿ ಲಿಂಕನ್ನು ಒತ್ತಿರಿ..

    Share Information
    Advertisement
    Click to comment

    You must be logged in to post a comment Login

    Leave a Reply